<p><strong>ಚೆನ್ನೈ:</strong> ಭಾರತದ ಪ್ರಮುಖ ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್, ಸೋಮವಾರದಿಂದ ನಡೆಯುವ ಚೆನ್ನೈ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.</p>.<p>ಒಟ್ಟು 64 ಮಂದಿ ಆಟಗಾರರು ಕಣದಲ್ಲಿರುವ ಟೂರ್ನಿಯಲ್ಲಿ ಎಡಗೈ ಆಟಗಾರ ಪ್ರಜ್ಞೇಶ್ ಅಗ್ರಶ್ರೇಯಾಂಕ ಹೊಂದಿದ್ದಾರೆ. ಅವರಿಗೆ ಮೊದಲ ಸುತ್ತಿನಲ್ಲಿ ‘ಬೈ’ ಲಭಿಸಿದೆ. ಪ್ರಜ್ಞೇಶ್, ಈ ಬಾರಿಯ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋತಿದ್ದರು. ಇಟಲಿ ಎದುರಿನ ಡೇವಿಸ್ ಕಪ್ ಪಂದ್ಯದಲ್ಲೂ ಅವರಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬಂದಿರಲಿಲ್ಲ. ತವರಿನಲ್ಲಿ ಪ್ರಶಸ್ತಿ ಜಯಿಸಿ ಹಿಂದಿನ ಎರಡು ಟೂರ್ನಿಗಳಲ್ಲಿ ಎದುರಾದ ನಿರಾಸೆ ಮರೆಯಲು ಅವರು ಕಾತರರಾಗಿದ್ದಾರೆ.</p>.<p>ರಾಮಕುಮಾರ್ ರಾಮನಾಥನ್ ಅವರು ಹಂಗರಿಯಲ್ಲಿ ನಡೆಯುತ್ತಿರುವ ಚಾಲೆಂಜರ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಈ ಟೂರ್ನಿಗೆ ಅಲಭ್ಯರಾಗಿದ್ದಾರೆ.</p>.<p>11ನೇ ಶ್ರೇಯಾಂಕದ ಆಟಗಾರ ಸಾಕೇತ್ ಮೈನೇನಿಗೂ ಆರಂಭಿಕ ಸುತ್ತಿನಲ್ಲಿ ‘ಬೈ’ ಸಿಕ್ಕಿದೆ.</p>.<p>16ನೇ ಶ್ರೇಯಾಂಕದ ಆಟಗಾರ ಶಶಿಕುಮಾರ್ ಮುಕುಂದ್, ಸುಮಿತ್ ನಗಾಲ್, ಎನ್.ವಿಜಯ್ ಸುಂದರ್ ಪ್ರಶಾಂತ್, ರಾಷ್ಟ್ರೀಯ ಚಾಂಪಿಯನ್ ಸಿದ್ದಾರ್ಥ್ ವಿಶ್ವಕರ್ಮ ಮತ್ತು ಮನೀಷ್ ಸುರೇಶ್ ಕುಮಾರ್ ಅವರೂ ಅಂಗಳಕ್ಕಿಳಿಯಲಿದ್ದಾರೆ.</p>.<p>ಆಸ್ಟ್ರೇಲಿಯಾದ ಜೇಮ್ಸ್ ಡಕ್ವರ್ಥ್, ದಕ್ಷಿಣ ಕೊರಿಯಾದ ಡುಖೀ ಲೀ, ಫ್ರಾನ್ಸ್ನ ಕಾರ್ನೆಟಿನ್ ಮೌಟೆಟ್, ಈಜಿಪ್ಟ್ನ ಮೊಹಮ್ಮದ್ ಸಫಾವತ್ ಹಾಗೂ ಇಟಲಿಯ ಜಿಯಾನ್ಲುಕಾ ಮಗೇರ್ ಅವರೂ ಪ್ರಶಸ್ತಿಯ ಕನಸಿನಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಭಾರತದ ಪ್ರಮುಖ ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್, ಸೋಮವಾರದಿಂದ ನಡೆಯುವ ಚೆನ್ನೈ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.</p>.<p>ಒಟ್ಟು 64 ಮಂದಿ ಆಟಗಾರರು ಕಣದಲ್ಲಿರುವ ಟೂರ್ನಿಯಲ್ಲಿ ಎಡಗೈ ಆಟಗಾರ ಪ್ರಜ್ಞೇಶ್ ಅಗ್ರಶ್ರೇಯಾಂಕ ಹೊಂದಿದ್ದಾರೆ. ಅವರಿಗೆ ಮೊದಲ ಸುತ್ತಿನಲ್ಲಿ ‘ಬೈ’ ಲಭಿಸಿದೆ. ಪ್ರಜ್ಞೇಶ್, ಈ ಬಾರಿಯ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋತಿದ್ದರು. ಇಟಲಿ ಎದುರಿನ ಡೇವಿಸ್ ಕಪ್ ಪಂದ್ಯದಲ್ಲೂ ಅವರಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬಂದಿರಲಿಲ್ಲ. ತವರಿನಲ್ಲಿ ಪ್ರಶಸ್ತಿ ಜಯಿಸಿ ಹಿಂದಿನ ಎರಡು ಟೂರ್ನಿಗಳಲ್ಲಿ ಎದುರಾದ ನಿರಾಸೆ ಮರೆಯಲು ಅವರು ಕಾತರರಾಗಿದ್ದಾರೆ.</p>.<p>ರಾಮಕುಮಾರ್ ರಾಮನಾಥನ್ ಅವರು ಹಂಗರಿಯಲ್ಲಿ ನಡೆಯುತ್ತಿರುವ ಚಾಲೆಂಜರ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಈ ಟೂರ್ನಿಗೆ ಅಲಭ್ಯರಾಗಿದ್ದಾರೆ.</p>.<p>11ನೇ ಶ್ರೇಯಾಂಕದ ಆಟಗಾರ ಸಾಕೇತ್ ಮೈನೇನಿಗೂ ಆರಂಭಿಕ ಸುತ್ತಿನಲ್ಲಿ ‘ಬೈ’ ಸಿಕ್ಕಿದೆ.</p>.<p>16ನೇ ಶ್ರೇಯಾಂಕದ ಆಟಗಾರ ಶಶಿಕುಮಾರ್ ಮುಕುಂದ್, ಸುಮಿತ್ ನಗಾಲ್, ಎನ್.ವಿಜಯ್ ಸುಂದರ್ ಪ್ರಶಾಂತ್, ರಾಷ್ಟ್ರೀಯ ಚಾಂಪಿಯನ್ ಸಿದ್ದಾರ್ಥ್ ವಿಶ್ವಕರ್ಮ ಮತ್ತು ಮನೀಷ್ ಸುರೇಶ್ ಕುಮಾರ್ ಅವರೂ ಅಂಗಳಕ್ಕಿಳಿಯಲಿದ್ದಾರೆ.</p>.<p>ಆಸ್ಟ್ರೇಲಿಯಾದ ಜೇಮ್ಸ್ ಡಕ್ವರ್ಥ್, ದಕ್ಷಿಣ ಕೊರಿಯಾದ ಡುಖೀ ಲೀ, ಫ್ರಾನ್ಸ್ನ ಕಾರ್ನೆಟಿನ್ ಮೌಟೆಟ್, ಈಜಿಪ್ಟ್ನ ಮೊಹಮ್ಮದ್ ಸಫಾವತ್ ಹಾಗೂ ಇಟಲಿಯ ಜಿಯಾನ್ಲುಕಾ ಮಗೇರ್ ಅವರೂ ಪ್ರಶಸ್ತಿಯ ಕನಸಿನಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>