ಬೆಂಗಳೂರು: ‘ಚುನಾವಣೆ ಮೂಲಕ ಐದು ವರ್ಷಗಳ ಅವಧಿಗೆ ಮೇಯರ್ ಆಯ್ಕೆ ನಡೆಯಬೇಕು. ಆದರೆ, ಬೆಂಗಳೂರಿನಲ್ಲಿ ಹೀಗೆ ಆಗುತ್ತಿಲ್ಲ’ ಎಂದು ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ಹೇಳಿದ್ದಾರೆ.
ಬಿ.ಪ್ಯಾಕ್ ಸಂಸ್ಥೆ ಆಯೋಜಿಸಿದ್ದ ‘ಭಾರತದಲ್ಲಿ ಆರ್ಥಿಕ ಮತ್ತು ರಾಜಕೀಯ ನೀತಿಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
‘ಎಲ್ಲಾ ಮಹಾನಗರಗಳಲ್ಲಿ ನೇರವಾಗಿ ಚುನಾಯಿತರಾದ ಮೇಯರ್ಗಳ ಅಗತ್ಯವಿದೆ’ ಎಂದು ಅವರು ಹೇಳಿದರು.
‘ನಗರದಲ್ಲಿ ವಾಸಿಸುವ ಶೇ 15ರಿಂದ 20ರಷ್ಟು ಮಕ್ಕಳಲ್ಲಿ ಹೃದಯರಕ್ತನಾಳದ ಸಮಸ್ಯೆ ಇದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಭಾರತದಲ್ಲಿ ಹಳ್ಳಿಗಳಿಂದ ನಗರಕ್ಕೆ ಹೋಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
‘ಭಾರತಕ್ಕೆ ಅತ್ಯುತ್ತಮವಾದ ಆರ್ಥಿಕ ಮಾದರಿ ಇಲ್ಲ. ಆದರೆ, ಸಾಮಾಜಿಕವಾಗಿ ನಾವು ಬಲಿಷ್ಠರಾಗಿದ್ದೇವೆ. ವೈವಿಧ್ಯ ಹಾಗೂ ಸಂಸ್ಕೃತಿಯಲ್ಲಿ ನಮ್ಮದು ಶ್ರೀಮಂತ ರಾಷ್ಟ್ರ’ ಎಂದರು.