ಉಡುಪಿ: ಭಾರತದ ಆಟಗಾರರಾದ ಕಿಶನ್ ಗಂಗೂಲಿ, ಮಕವಾನ ಅಶ್ವಿನ್, ಕೃಷ್ಣ ಉಡುಪ, ಸ್ವಪ್ನಿಲ್ ಶಾ, ಯದು ಜೀತ್ ಡೇ, ಪಾಟೀಲ್ ಶಿರಿಶ್, ಸೌಂದ ರ್ಯ ಕುಮಾರ್ ಪ್ರಧಾನ್ ಮತ್ತು ಆರ್ಯ ಜೋಶಿ ಅಂಧರ ಏಷ್ಯನ್ ಚೆಸ್ ಚಾಂಪಿ ಯನ್ಶಿಪ್ನ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದರು.
ಮಣಿಪಾಲ ವಿಶ್ವವಿದ್ಯಾಲಯ, ಅಖಿಲ ಭಾರತ ಅಂಧರ ಚೆಸ್ ಒಕ್ಕೂಟ, ಅಂತರರಾಷ್ಟ್ರೀಯ ಅಂಧರ ಚೆಸ್ ಸಂಘಟನೆ ಮತ್ತು ಅಖಿಲ ಭಾರತ ಚೆಸ್ ಒಕ್ಕೂಟ ಆಯೋಜಿಸಿರುವ ಈ ಕೂಟ ದಲ್ಲಿ ಬಾಂಗ್ಲಾ ದೇಶದ ಫಿಡೆ ಅಗ್ರ ಶ್ರೇಯಾಂಕಿತ ಆಟಗಾರ ಹುಸೇನ್ ಎಜಾಜ್ ಅವರು ಮೊದಲ ಹಣಾಹಣಿ ಯಲ್ಲಿ ಗೆದ್ದರು.
ವೈಶಾಲಿ ನರೇಂದ್ರ ಸಾಲ್ವಂಕರ್ ಅವರು ಬಾಂಗ್ಲಾ ದೇಶದ ಸರ್ಕಾರ್ ಬಪ್ಪಿ ಅವರೊಂದಿಗೆ ಹಾಗೂ ಸಮಂತ್ ಮಿಲಿಂದ್ ಅವರು ಫಿಲಿಪಿನ್ಸ್ನ ರೊಡೊಲ್ಫೊ ಸರ್ಮೇಯಿನ್ ಅವರ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡರು.