<p><strong>ಶ್ರೀನಗರ (ಪಿಟಿಐ): </strong>ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಸರಣಿ ನಡೆಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರವನ್ನು ಬೆಂಬಲಿಸಿರುವ ಭಾರತ ತಂಡದ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ `ರಾಜಕೀಯ ಮತ್ತು ಕ್ರಿಕೆಟ್ ಮಿಶ್ರಣ ಬೇಡ~ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.<br /> <br /> `ನಾವು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ. ರಾಜಕೀಯವೇ ಬೇರೆ. ಕ್ರೀಡೆಯೇ ಬೇರೆ. ಆಟಗಾರರೇ ಆಡಲು ಮುಂದಾಗಿರುವಾಗಿ ಅದನ್ನು ವಿರೋಧಿಸುವುದಕ್ಕೆ ನಾವು ಯಾರು?~ ಎಂದು ಬೇಡಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.<br /> <br /> `ಎರಡೂ ದೇಶಗಳ ತಂಡದವರು ನಿರಂತರವಾಗಿ ಕ್ರಿಕೆಟ್ ಆಡಲಿ. ಇದೊಂದು ಅತ್ಯುತ್ತಮ ಸರಣಿ. ಭಾರತದ ಆಟಗಾರರು ಈ ಸರಣಿಯನ್ನು ಒತ್ತಡದಿಂದಲೇ ಆಡಬೇಕಾಗುತ್ತದೆ. ಏಕೆಂದರೆ, ಇಂಗ್ಲೆಂಡ್ ಎದುರು ಸರಣಿಯನ್ನಾಡಿ ಮರಳಿರುತ್ತಾರೆ. ಯುವರಾಜ್ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಆಗಮಿಸುವುದು ಕಷ್ಟಸಾಧ್ಯ~ ಎಂದು ಬೇಡಿ ನುಡಿದರು.</p>.<p>`ಯುವರಾಜ್ ದೈಹಿಕ ಸಾಮರ್ಥ್ಯದಲ್ಲಿ ಸುಧಾರಣೆ ಕಂಡು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳುತ್ತಾರೆ ಎನ್ನುವುದಾದರೆ ಸಂತೋಷ. ನಾನು ಎಡಗೈ ಬ್ಯಾಟ್ಸ್ಮನ್ನಿಗೆ ಬೆಂಬಲವಾಗಿ ನಿಲ್ಲುತ್ತೇನೆ. ಆತನ ಪರವಾಗಿ ಪ್ರಾರ್ಥನೆ ಸಲ್ಲಿಸುತ್ತೇನೆ~ ಎಂದು ಬೇಡಿ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ (ಪಿಟಿಐ): </strong>ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಸರಣಿ ನಡೆಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರವನ್ನು ಬೆಂಬಲಿಸಿರುವ ಭಾರತ ತಂಡದ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ `ರಾಜಕೀಯ ಮತ್ತು ಕ್ರಿಕೆಟ್ ಮಿಶ್ರಣ ಬೇಡ~ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.<br /> <br /> `ನಾವು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ. ರಾಜಕೀಯವೇ ಬೇರೆ. ಕ್ರೀಡೆಯೇ ಬೇರೆ. ಆಟಗಾರರೇ ಆಡಲು ಮುಂದಾಗಿರುವಾಗಿ ಅದನ್ನು ವಿರೋಧಿಸುವುದಕ್ಕೆ ನಾವು ಯಾರು?~ ಎಂದು ಬೇಡಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.<br /> <br /> `ಎರಡೂ ದೇಶಗಳ ತಂಡದವರು ನಿರಂತರವಾಗಿ ಕ್ರಿಕೆಟ್ ಆಡಲಿ. ಇದೊಂದು ಅತ್ಯುತ್ತಮ ಸರಣಿ. ಭಾರತದ ಆಟಗಾರರು ಈ ಸರಣಿಯನ್ನು ಒತ್ತಡದಿಂದಲೇ ಆಡಬೇಕಾಗುತ್ತದೆ. ಏಕೆಂದರೆ, ಇಂಗ್ಲೆಂಡ್ ಎದುರು ಸರಣಿಯನ್ನಾಡಿ ಮರಳಿರುತ್ತಾರೆ. ಯುವರಾಜ್ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಆಗಮಿಸುವುದು ಕಷ್ಟಸಾಧ್ಯ~ ಎಂದು ಬೇಡಿ ನುಡಿದರು.</p>.<p>`ಯುವರಾಜ್ ದೈಹಿಕ ಸಾಮರ್ಥ್ಯದಲ್ಲಿ ಸುಧಾರಣೆ ಕಂಡು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳುತ್ತಾರೆ ಎನ್ನುವುದಾದರೆ ಸಂತೋಷ. ನಾನು ಎಡಗೈ ಬ್ಯಾಟ್ಸ್ಮನ್ನಿಗೆ ಬೆಂಬಲವಾಗಿ ನಿಲ್ಲುತ್ತೇನೆ. ಆತನ ಪರವಾಗಿ ಪ್ರಾರ್ಥನೆ ಸಲ್ಲಿಸುತ್ತೇನೆ~ ಎಂದು ಬೇಡಿ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>