ಬರ್ಲಿನ್: ಭಾರತದ ಸ್ಪರ್ಧಿಗಳು ವಿಶ್ವಕಪ್ ಆರ್ಚರಿಯಲ್ಲಿ ಒಂದೂ ಪದಕ ಗೆಲ್ಲದೆ ನಿರಾಸೆ ಅನುಭವಿಸಿದ್ದಾರೆ. ಕಂಪೌಂಡ್ ವಿಭಾಗದಲ್ಲಿ ಪುರುಷರ ತಂಡ ಜರ್ಮನಿ ಎದುರು ಸೋಲು ಕಂಡು ಮೂರನೇ ಸ್ಥಾನ ಪಡೆಯುವ ಅವಕಾಶ ಕಳೆದುಕೊಂಡಿತು.
ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಭಾರತ ತಂಡ 225–227 ಪಾಯಿಂಟ್ಸ್ಗಳ ಅಂತರದಲ್ಲಿ ಐದನೇ ಶ್ರೇಯಾಂಕದ ಜರ್ಮನಿ ಎದುರು ನಿರಾಸೆ ಅನುಭವಿಸಿತು. ತಂಡದಲ್ಲಿ ಅಭಿಷೇಕ್ ವರ್ಮಾ, ಅಮನ್ ಸೈನಿ ಮತ್ತು ಅಮನ್ಜಿತ್ ಸಿಂಗ್ ಇದ್ದರು.
ಈ ವರ್ಷದ ಅಂತಿಮ ಹಂತದ ಆರ್ಚರಿ ವಿಶ್ವಕಪ್ ಇದಾಗಿದ್ದು, ಭಾರತದ ಸ್ಪರ್ಧಿಗಳು ಒಂದೂ ಪದಕ ಗೆಲ್ಲದೆ ತವರಿಗೆ ಮರಳಿದ್ದಾರೆ.