ಶಾಲಾ–ಕಾಲೇಜು ಮೈದಾನ, ಸರ್ಕಾರಿ ಶಾಲೆಗಳ ಆವರಣ, ದೇಗುಲದ ಪ್ರಾಂಗಣ, ಗುಂಡು ತೋಪು, ಕೆರೆ ಅಂಗಳ, ಸರ್ಕಾರಿ ಭೂಮಿ, ಗೋಮಾಳ, ಸಮುದಾಯದ ಭೂಮಿ, ರಸ್ತೆ ಬದಿ, ಉದ್ಯಾನಗಳು, ಬಡಾವಣೆಗಳು, ಸ್ಮಶಾನಗಳಲ್ಲೂ ಗಿಡ ನೆಡುವಿಕೆಗೆ ಆಯಾ ವಲಯ ಅರಣ್ಯಾಧಿಕಾರಿಗಳು ಕ್ರಿಯಾ ಯೋಜನೆಯನ್ನು ಈಗಾಗಲೇ ರೂಪಿಸಿಕೊಂಡಿದ್ದಾರೆ ಎಂದು ಮೈಸೂರು ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ.ಮಹದೇವ್ ಹೇಳಿದರು.