ಜೆಡಿಎಸ್ ಅಭ್ಯರ್ಥಿ ದೇವೇಂದ್ರಪ್ಪ ಚಿಕ್ಕಮ್ಮನಹಟ್ಟಿ ಮಾತನಾಡಿ, ‘10 ವರ್ಷಗಳ ಮೀಸಲು ಅವಧಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ಆಡಳಿತಾವಧಿಯಲ್ಲಿ ಜಗಳೂರು ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಸ್ಥಳೀಯನಾದ ನಾನು ಜನಪರ ಪಕ್ಷವಾದ ಜೆಡಿಎಸ್ ಮೂಲಕ ರಾಜಕೀಯ ಪಾದಾರ್ಪಣೆ ಮಾಡುತ್ತಿದ್ದೇನೆ. ಜನರು ನನ್ನ ಕೈಹಿಡಿಯುವ ವಿಶ್ವಾಸ ಇದೆ. ಮಾರ್ಚ್ 31ರಂದು ಪಕ್ಷದ ರಾಜ್ಯ ಘಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಜಗಳೂರಿಗೆ ಬರುತ್ತಿದ್ದು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು’ ಎಂದು ಮನವಿ ಮಾಡಿದರು.