ಡ್ಯಾನಿಷ್ ಅಲಿ ಅವರನ್ನು ಜೆಡಿಎಸ್ ಚಿಹ್ನೆಯ ಮೇಲೆಯೇಉತ್ತರ ಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿಸಬೇಕು ಎಂದು ದೇವೇಗೌಡರು ಬಯಸಿದ್ದರು. ಆದರೆ, ಉತ್ತರ ಪ್ರದೇಶದ ಜನರಿಗೆ ಜೆಡಿಎಸ್ಚಿಹ್ನೆಯ ಪರಿಚಯ ಇಲ್ಲದ ಕಾರಣಕ್ಕೆ ಡ್ಯಾನಿಷ್ ಅಲಿ ಬಿಎಸ್ಪಿ ಚಿಹ್ನೆಯಿಂದ ಸ್ಪರ್ಧಿಸಲಿ ಎಂದು ಮಾಯಾವತಿ ಅವರು ದೇವೇಗೌಡರಿಗೆ ತಿಳಿಸಿದ್ದರು ಎನ್ನಲಾಗಿತ್ತು. ಅದೇ ಮೇರೆಗೆ ಡ್ಯಾನಿಷ್ ಜೆಡಿಎಸ್ ತೊರೆದು ಬಿಎಸ್ಪಿ ಸೇರಿದ್ದರು. ಮಾಯಾವತಿ ಅವರ ಲೆಕ್ಕಾಚಾರ ಫಲಿಸಿದ್ದು, ಡ್ಯಾನಿಷ್ ಅಲಿ ಸಂಸದರಾಗಿ ಆಯ್ಕೆಯಾಗಿದ್ದಾರೆ.