‘ಎರಡು ದಿನಗಳ ಬಳಿಕ ಮೊಬೈಲ್ಗೆ ಕರೆ ಮಾಡಿದ್ದೆ. ಬೆಂಗಳೂರಿಗೆ ಬರುವಂತೆ ಆರೋಪಿ ಹೇಳಿದ್ದ. 2018ರ ಅ. 24ರಂದು ಮೆಜೆಸ್ಟಿಕ್ಗೆ ಬಂದಿದ್ದೆ. ಆರೋಪಿ ಮಲ್ಲಿಕಾರ್ಜುನ, ಕ್ಲಿನಿಕ್ಗೆ ಕರೆದೊಯ್ದು ಆನಂದ್ ಎಂಬಾತನನ್ನು ವೈದ್ಯನೆಂದು ಪರಿಚಯ ಮಾಡಿಸಿದ್ದ. ಆತನೇ ತೈಲದಲ್ಲಿ ಹಲವು ಬಗೆಯ ಭಸ್ಮಗಳನ್ನು ಬೆರೆಸಿ ಕೊಟ್ಟಿದ್ದ. ತಲೆ, ಕೈ– ಕಾಲುಗಳಿಗೆ ತೈಲ ಹಚ್ಚಿದರೆ ನೋವು ಹೋಗುತ್ತದೆ ಎಂದಿದ್ದ. ಆ ತೈಲ ಔಷಧಿಗೆ ₹4.05 ಲಕ್ಷ ಕೇಳಿದ್ದ. ₹10,790 ಸ್ಥಳದಲ್ಲೇ ಆತನಿಗೆ ಕೊಟ್ಟು, ಉಳಿದ ಹಣಕ್ಕೆ ಚೆಕ್ ನೀಡಿದ್ದೆ’ ಎಂದು ದೂರಿನಲ್ಲಿ ಹೇಳಿದ್ದಾರೆ.