2010ರಲ್ಲೂ ಢಾಕಾದ ಹಳೆದ ಕಟ್ಟಡವೊಂದರಲ್ಲಿ ಇದೇ ರೀತಿ ಅಗ್ನಿ ಅವಘಡ ಸಂಭವಿಸಿ, 120 ಮಂದಿ ಮೃತರಾಗಿದ್ದರು. ಈ ವೇಳೆ ರಾಸಾಯನಿಕ ಗೋದಾಮುಗಳನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ, ಒಂಬತ್ತು ವರ್ಷಗಳ ನಂತರವೂ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ. ಕೆಲವೇ ಗೋದಾಮುಗಳನ್ನು ಮಾತ್ರ ಸ್ಥಳಾಂತರಿಸಲಾಗಿದೆ.