ಬುಧವಾರ ಮಧ್ಯಾಹ್ನ ಸ್ಯಾನಿಟರಿ ಪೈಪ್ ಅಳವಡಿಸುತ್ತಿದ್ದ ವೇಳೆ ಮಣ್ಣು ಕುಸಿದು ಜೇವರ್ಗಿ ತಾಲ್ಲೂಕಿನ ಮಡಿವಾಳಪ್ಪ ಗೌಡ ಅಲಿಯಾಸ್ ಮುತ್ತು (26) ಎಂಬುವರು ಮೃತಪಟ್ಟು, ವಿಜಯಪುರದ ಕಾರ್ಮಿಕ ಶರಣಗೌಡ ಗಾಯಗೊಂಡಿದ್ದರು. ಮಣ್ಣಿನಲ್ಲಿ ಹೂತು ಹೋಗಿದ್ದ ಮಡಿವಾಳಪ್ಪ ಅವರ ದೇಹವನ್ನು ಹೊರತೆಗೆಯಲು ಹರಸಾಹಸಪಟ್ಟಿದ್ದ ಅಗ್ನಿಶಾಮಕ ಸಿಬ್ಬಂದಿ, ಸತತ ಎಂಟು ತಾಸು ಕಾರ್ಯಾಚರಣೆ ನಡೆಸಿ ರಾತ್ರಿ 11 ಗಂಟೆಗೆ ಹೊರತೆಗೆದಿದ್ದರು.