ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಸಿಬಿ ಪೊಲೀಸರು ತನಿಖಾ ಪ್ರಕ್ರಿಯೆ ತಿಳಿಸಲು ಡಿಜಿಪಿ ಮತ್ತು ಗೃಹ ಸಚಿವರನ್ನು ಸಂಪರ್ಕಿಸದೆ, ನೇರವಾಗಿ ಮುಖ್ಯಮಂತ್ರಿ ಅವರನ್ನೇ ಭೇಟಿಯಾಗುತ್ತಿರುವುದೇಕೆ? ಆರೋಪಿ ಫರೀದ್ನನ್ನು ಬಂಧಿಸಿಲ್ಲವೇಕೆ? ಉದ್ಯಮಿ ವಿಜಯ್ ತಾತಾ (ಫರೀದ್ನಿಂದ ಹಣ ಪಡೆದವ) ಅವರ ಮನೆ ಮೇಲೆ ದಾಳಿ ನಡೆಸಿದರೂ, ಅವರನ್ನು ಈವರೆಗೂ ಬಂಧಿಸಿಲ್ಲ. ಈ ಬೆಳವಣಿಗೆಗಳು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿವೆ. ಹೀಗಾಗಿ, ಗೃಹಇಲಾಖೆ ಅಲೋಕ್ ಕುಮಾರ್ಗೆ ನೋಟಿಸ್ ಕೊಟ್ಟು ವಿವರಣೆ ಪಡೆಯಬೇಕು’ ಎಂದು ಆಗ್ರಹಿಸಿದರು.