‘ಸ್ವಲ್ಪ ಮಳೆಯಿಂದ ಕಾಡುಮೇಡು, ಹೊಲ, ಮಾಳ, ತಕ್ಕಲುಗಳಲ್ಲಿ ಹಸಿರು ಚಿಗುರೊಡೆದಿತ್ತು. ಈಗ ಮಳೆಯಿಲ್ಲದೆ ಅದು ಸಹ ಬಾಡುತ್ತಿದೆ. ಕೆರೆ, ಕುಂಟೆ, ಚೆಕ್ ಡ್ಯಾಂಗಳು ಬತ್ತಿವೆ. ಜಾನುವಾರುಗಳಿಗೆ ಮನೆಯಲ್ಲಿಯೇ ನೀರು ಕುಡಿಸಬೇಕಿದೆ. ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಎರಡು ಮೂರು ದಿನಗಳಿಗೆ ಒಮ್ಮೆ ಮನೆಗಳಿಗೆ ನೀರು ಪೂರೈಕೆ ಆಗುತ್ತಿದೆ’ ಎಂದು ಅಳಲು ತೋಡಿಕೊಂಡರು ಕುರುವೆಲ್ ತಿಮ್ಮನಹಳ್ಳಿಯ ಸಂತೋಷ್.