ಸೋಮವಾರ ಬೆಳಿಗ್ಗೆ 10ರ ಸಮಯದಲ್ಲಿ ತಿಂಡಿ ತಿಂದು ಹಳೇ ನಿಜಗಲ್ ಬಳಿಯ ಕೋಡಿ ಸಿದ್ದೇಶ್ವರ ದೇವಾಲಯದ ಸ್ವಚ್ಛತೆಗೆ ವಿದ್ಯಾರ್ಥಿಗಳು ಬಂದಿದ್ದಾರೆ. ಆಗ ಈ ಮೂವರು ಸಮೀಪದ ಕೆರೆಯ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾರೆ. ಮೊದಲಿಗೆ ಪೂರ್ಣಚಂದ್ರ ಜಾರಿ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಮೊಹಮ್ಮದ್ ಮೂರ್ತಜ್, ಶಶಾಂಕ್ ಕೂಡ ಬಿದ್ದಿದ್ದಾರೆ
ಇವರನ್ನು ರಕ್ಷಿಸಲು ಮುಂದಾದ ಶಿಬಿರದ ಅಧಿಕಾರಿಯೂ ನೀರಿನಲ್ಲಿ ಮುಳುಗುತ್ತಿದ್ದು ಇತರ ವಿದ್ಯಾರ್ಥಿಗಳು ಅವರನ್ನು ರಕ್ಷಿಸಿದ್ದಾರೆ.