‘ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬೋಧಕರ ಹುದ್ದೆಗಳ ನೇಮಕಾತಿ ಸಲುವಾಗಿ ಸಂದರ್ಶನ ನಡೆಸಬಾರದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್ ಅವರಿಂದ ಮೌಖಿಕ ಸೂಚನೆ ಇತ್ತು. ಆದಾಗ್ಯೂ ಸಂದರ್ಶನ ನಡೆಸಿದ್ದು ತನಿಖೆ ವೇಳೆ ಸಾಬೀತಾಗಿದ್ದರಿಂದ ಪ್ರಕರಣ ದಾಖಲಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ರಮೇಶ್ ಕೊನರೆಡ್ಡಿ ತಿಳಿಸಿದರು. ಮಾರ್ಚ್ 12ರಿಂದ ಆರಂಭವಾದ ಸಂದರ್ಶನ ಪ್ರಕ್ರಿಯೆ, ಅಂದು ಸಂಜೆಯವರೆಗೂ ನಡೆದಿತ್ತು. ನಂತರ ಸ್ಥಗಿತಗೊಳಿಸಲಾಗಿತ್ತು.