‘ಇಬ್ಬರು (ಉನ್ನಿಕೃಷ್ಣನ್ ಮತ್ತು ಜಯಶೀಲನ್) ಗೋಣಿ ಚೀಲದಲ್ಲಿ ದಂತಗಳನ್ನು ತುಂಬಿಕೊಂಡು ಕಾಳಿಂಗ ರಾವ್ ವೃತ್ತದ ಬಳಿ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಅವರಿಬ್ಬರನ್ನೂ ವಿಚಾರಣೆ ನಡೆಸಿದಾಗ, ತಮಗೆ ಆನೆ ದಂತಗಳನ್ನು ಮಾದೇಶ್ವರನ್ ಮತ್ತು ವಿಜಯ್ ತಂದುಕೊಡುತ್ತಿದ್ದರೆಂದು ತಿಳಿಸಿದರು’ ಎಂದು ಪೊಲೀಸರು ಹೇಳಿದರು.