‘ರಾಜಾಜಿನಗರದ ರಾಮಮಂದಿರ ನಿವಾಸಿಯಾದ ಮನೋಜ್, ಗುತ್ತಿಗೆದಾರ. ಆತನ ಸಹೋದರ ಜಯಂತ್, ವಾಟಾಳ್ ನಾಗರಾಜ್ ರಸ್ತೆಯಲ್ಲಿರುವಎಸ್.ವಿ. ಬಾರ್ನಲ್ಲಿ ಸ್ನೇಹಿತರ ಜತೆ ಮದ್ಯ ಕುಡಿದು ಹೊರಗಡೆ ಬಂದು ಮಾತನಾಡುತ್ತ ನಿಂತಿದ್ದ. ಅದೇ ಸ್ಥಳದಲ್ಲಿದ್ದ ಆದರ್ಶ್ ಮತ್ತು ಮುಖೇಶ್, ಆತನನ್ನು ಗುರಾಯಿಸಿದ್ದರು. ಅಷ್ಟಕ್ಕೆ ಎರಡೂ ಗುಂಪಿನ ನಡುವೆ ಮಾರಾಮಾರಿ ನಡೆದಿತ್ತು. ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದರು’ ಎಂದು ಪೊಲೀಸರು ಹೇಳಿದರು.