‘ಅಶೋಕ ಮತ್ತು ನನ್ನ ಸ್ನೇಹ ಇಂದು ನಿನ್ನೆಯದಲ್ಲ. ನಾವು ಸಾಹಿತ್ಯ ಕೂಟವನ್ನು ರಚಿಸಿಕೊಂಡಿದ್ದೆವು. ಆಗಅವರು ತಮ್ಮ ಕೈಬರಹದ ಪ್ರತಿಗಳನ್ನು ನನ್ನೊಂದಿಗೆ ಓದಿಸುತ್ತಿದ್ದರು. ಒಂದು ಚಿಕ್ಕಪುಸ್ತಕದಿಂದ ಶುರುವಾದ ಅವರ ಸಾಹಿತ್ಯ ಕೃಷಿ, ಇಂದು ಇಡೀ ಸಾರಸ್ವತ ಲೋಕವನ್ನು ಆವರಿಸಿದೆ. ಸಂಬಂಧ, ಭಾವ ಮತ್ತು ಸದ್ಭಾವನಕ್ಕೆ ಮಹತ್ವ ಕೊಡುವ ಈ ಕಾಲದ ಪ್ರಮುಖ ವಿಮರ್ಶಕ ಅವರು’ ಎಂದು ಅವರು ಪ್ರಶಂಸಿದರು.