‘ಪ್ರತಿದಿನ ರಾತ್ರಿ ವೇಳೆಯಲ್ಲಿ ಬಿಬಿಎಂಪಿಯ ಕಸದ ಲಾರಿಗಳು ಬಂದು ಕೆರೆಯ ದಂಡೆಗೆ ತ್ಯಾಜ್ಯವನ್ನು ಸುರಿದು ಹೋಗುತ್ತಿವೆ. ಅಲ್ಲದೆ ಸುರಿದ ತ್ಯಾಜ್ಯಕ್ಕೆ ಬೆಳಿಗ್ಗೆ ಪೌರಕಾರ್ಮಿಕರು ಬೆಂಕಿ ಹಚ್ಚಿ ಹೋಗುತ್ತಿದ್ದಾರೆ. ಇದರಿಂದಾಗಿ ಕೆರೆಯ ಸುತ್ತಮುತ್ತ ದುರ್ನಾತ ಹೆಚ್ಚಿದೆ. ಹೊಗೆ ಕೂಡ ಆವರಿಸಿಕೊಂಡಿರುತ್ತದೆ. ಸುತ್ತಮುತ್ತಲಿನ ನಿವಾಸಿಗಳು ಉಸಿರು ಬಿಗಿಹಿಡಿದುಕೊಂಡು ಬದುಕುವಂತಾಗಿದೆ’ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.