ಕರಗದಲ್ಲಿ ಮಲ್ಲಿಗೆ ಹೂವು ಪ್ರಮುಖ ಆಕರ್ಷಣೆ. ವೀರಕುಮಾರರು, ಗೌಡರು, ಗಣಾಚಾರಿಗಳು, ಗಂಟೆ ಪೂಜಾರಿ, ಧರ್ಮದರ್ಶಿಗಳು, ಗಣ್ಯರಿಗಾಗಿ ವಿಶೇಷ ಮಲ್ಲಿಗೆ ಹಾರ ಬಳಸಲಾಗಿತ್ತು. ಎಲ್ಲರೂ ಕರಗ ಮುಗಿಯುವ ತನಕ ಹಾರ ಹಾಕಿಕೊಂಡೇ ಇದ್ದರು. ಅರ್ಚಕ ಮನು ಅವರು ಕರಗ ಹೊರುವ ಮೊದಲ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಸಮಿತಿ ಸದಸ್ಯರು ಹೇಳಿದರು.