‘ಹಲವು ವರ್ಷಗಳಿಂದ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಕೃಷ್ಣಪ್ಪ, ಸಾಲಗಾರರಿಂದ ಭದ್ರತೆಗಾಗಿ ಖಾಲಿ ಚೆಕ್ ಹಾಗೂ ಮನೆ, ನಿವೇಶನದ ದಾಖಲೆಗಳನ್ನು ಪಡೆಯುತ್ತಿದ್ದ. ಸಾಲಗಾರರು ಮೀಟರ್ ಬಡ್ಡಿ ಹಾಗೂ ಅಸಲು ಸಮೇತ ಸಾಲ ತೀರಿಸಿದರೂ ಖಾಲಿ ಚೆಕ್ ಹಾಗೂ ದಾಖಲೆಗಳನ್ನು ಆರೋಪಿ ವಾಪಸ್ ಕೊಡುತ್ತಿರಲಿಲ್ಲ’ ಎಂದು ಸಿಸಿಬಿ ಪೊಲೀಸರು ಹೇಳಿದರು.