ಈ ಬಾರಿಯ ಸಂಗೀತೋತ್ಸವದಲ್ಲಿಯೂ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದ ಜುಗಲ್ ಬಂದಿ ಕಾರ್ಯಕ್ರಮ, ಯುವ ಸಂಗೀತ ಉತ್ಸವವೂ ಇರಲಿವೆ. ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್, ಟಿ.ವಿ.ಶಂಕರನಾರಾಯಣ, ಅಭಿಷೇಕ್ ರಘುರಾಂ, ಎಂ.ಎಸ್.ಶೀಲಾ, ಹೈದರಾಬಾದ್ ಸಹೋದರರು, ಕದ್ರಿ ಗೋಪಾಲನಾಥ್, ಬಾಂಬೆ ಜಯಶ್ರೀ ರಾಮನಾಥ್ ಅವರು ಸಂಗೀತ ಸುಧೆಯನ್ನು ಹರಿಸಲಿದ್ದಾರೆ. ‘ಪ್ರಜಾವಾಣಿ’ ಉತ್ಸವದ ಸಹಭಾಗಿತ್ವ ವಹಿಸಿಕೊಂಡಿದೆ.