ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಪತ್ರಕರ್ತ ಬಿ.ಜಯಕುಮಾರ್ ನಿಧನ

Last Updated 6 ಫೆಬ್ರುವರಿ 2019, 19:27 IST
ಅಕ್ಷರ ಗಾತ್ರ

ರಾಜರಾಜೇಶ್ವರಿ ನಗರ: ಹಿರಿಯ ಪತ್ರಕರ್ತ ಬಿ.ಜಯಕುಮಾರ್ (68) ಅವರು ಬುಧವಾರ ಬೆಳಿಗ್ಗೆ ರಾಜಾಜಿನಗರದ ಕಾಡೆ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಮೂಲತಃ ಹೊಸಕೋಟೆಯ ನಂದಗುಡಿ ಗ್ರಾಮದಲ್ಲಿ ಜನಿಸಿದ ಅವರು ನಾಗರಭಾಬಾವಿಯಲ್ಲಿ ವಾಸವಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ.

ರಂಗೋಲಿ ಸಿನಿಮಾ ಪತ್ರಿಕೆ, ಸ್ಟ್ರಾಂಗ್ ಇಂಡಿಯಾ, ರಾಜಋಷಿ ಪಾಕ್ಷಿಕ ಪತ್ರಿಕೆ ಸಂಪಾದಕರಾಗಿ,ಸ್ಟ್ರಾಂಗ್ ಇಂಡಿಯಾ ಪತ್ರಿಕೆಯಲ್ಲಿ ಸಂಪಾದಕ, ಪ್ರಕಾಶಕರಾಗಿ ದುಡಿದಿದ್ದರು. 1984ರಲ್ಲಿ ಇವರ ಸಂಘಟನೆಯ ಅಡಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅಂತ್ಯಕ್ರಿಯೆ ನಗರದ ಚಾಮರಾಜಪೇಟೆಯ ವೀರಶೈವ ರುದ್ರಭೂಮಿಯಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT