ಯುವಿಸಿಇ ಯುನಿಟರಿ ವಿಶ್ವವಿದ್ಯಾಲಯವಾಗಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ಪ್ರತಿಪಾದಿಸಿದರೆ, ಯುವಿಸಿಇ ಅನ್ನು ವಿಭಜಿಸಿ ಎರಡು ಎಂಜಿನಿಯರಿಂಗ್ ಕಾಲೇಜುಗಳನ್ನಾಗಿ ಮಾಡಬೇಕು ಎಂಬುದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವಾದವಾಗಿತ್ತು. ಈ ಎರಡೂ ಯೋಜನೆಗಳನ್ನು ವಿರೋಧಿಸಿದ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರು, ಯಾವುದೇ ಹೊಸ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ವಿಟಿಯು ಅವಕಾಶ ಕೊಡುವುದಿಲ್ಲ ಎಂದರು. ವಿಟಿಯುಗೆ ಕಾಲೇಜನ್ನು ಹಸ್ತಾಂತರಿಸಿದರೂ ಕಾಯ್ದೆಯನ್ನು ಬದಲಿಸಲೇಬೇಕು ಎಂದು ಅವರು ಪ್ರತಿಪಾದಿಸಿದರು.