‘ಬಿಜೆಪಿ ಸತ್ಯವನ್ನು ತಿರುಚಿ ಮಾಹಿತಿ ನೀಡಿರಬಹುದು. ಪ್ರಕರಣಕ್ಕೆ ಸಂಬಂಧಿಸಿದ ಸತ್ಯಾಂಶದ ಕುರಿತು ನಿಮ್ಮ ಗಮನ ಸೆಳೆಯಲು ಬಯಸುತ್ತಿದ್ದೇನೆ. ಮೃತರ ಶರ್ಟ್ ಜೇಬಿನಲ್ಲಿ ಡೆತ್ನೋಟ್ ದೊರಕಿದ್ದು, ಹಣಕಾಸಿನ ವ್ಯವಹಾರ ಸಂಬಂಧ ಹೊಂದಿದ್ದ ಇಬ್ಬರ ಹೆಸರನ್ನೂ ಅವರು ಪತ್ರದಲ್ಲಿ ಬರೆದಿದ್ದಾರೆ. ಈ ಇಬ್ಬರಲ್ಲಿ ಒಬ್ಬರನ್ನು ಈಗಾಗಲೇ ಸಿಐಡಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.