<p class="title"><strong>ನವದೆಹಲಿ: </strong>'ಜಗತ್ತು ಇಂದು ಅಸಾಧಾರಣ ಸವಾಲುಗಳನ್ನು ಎದುರಿಸುತ್ತಿದ್ದು, ಇದರಿಂದ ಹೊರಬರುವ ಪರಿಹಾರ ಮಾರ್ಗಗಳು ಬುದ್ಧನ ಬೋಧನೆಗಳಲ್ಲಿ ಇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರತಿಪಾದಿಸಿದರು.</p>.<p class="title">ಧಮ್ಮ ಚಕ್ರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸಾರನಾಥದಲ್ಲಿ ಬುದ್ಧ ನೀಡಿದ ತನ್ನ ಮೊದಲ ಧರ್ಮೋಪದೇಶದಲ್ಲಿ ವಿಶ್ವಾಸ ಮತ್ತು ಸಂಕಲ್ಪಶಕ್ತಿಯ ಬಗ್ಗೆ ಪ್ರಸ್ತಾಪಿಸುತ್ತಾರೆ. ಇದು, ಮನುಷ್ಯನ ನೋವುಗಳನ್ನು ಶಮನಗೊಳಿಸುವ ಕ್ರಮವೇ ಆಗಿದೆ' ಎಂದು ಅಭಿಪ್ರಾಯಪಟ್ಟರು.</p>.<p class="title">'ನಾವು ಯಾವುದೇ ಸಂದರ್ಭ ಬಂದರೂ ಎದುರಿಸಲು ಸನ್ನದ್ಧರಾಗಬೇಕು. ಜನರಲ್ಲಿ ವಿಶ್ವಾಸವನ್ನು ಇಮ್ಮಡಿಸಲು ಏನು ಸಾಧ್ಯವೋ ಅದನ್ನು ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.</p>.<p class="title">‘ಭರವಸೆ, ಅನ್ವೇಷಣೆ, ಸಾಧನೆಗಳಿಂದ ಸಂಕಷ್ಟ ಶಮನ ಸಾಧ್ಯ ಎಂಬುದಕ್ಕೆ ಭಾರತದ ನವೋದ್ಯಮ ಕ್ಷೇತ್ರವು ಉತ್ತಮ ನಿದರ್ಶನ. ಯುವ ಪ್ರತಿಭಾವಂತರು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಭಾರತವು ಸ್ಟಾರ್ಟ್ ಅಪ್ ಕ್ಷೇತ್ರದ ಅತಿದೊಡ್ಡ ಕೇಂದ್ರವಾಗಿದೆ ಎಂದು ಹೇಳಿದರು.</p>.<p>ಬುದ್ಧನ ಅಷ್ಟಾಂಗ ಮಾರ್ಗಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ‘ಇವು ಹಲವು ಸಮಾಜ, ದೇಶಗಳಿಗೆ ಸನ್ನಡತೆಯ ಮಾರ್ಗಗಳಾಗಿವೆ. ಇವು ದಯಾಗುಣವನ್ನು ಎತ್ತಿಹಿಡಿದಿವೆ’ ಎಂದರು.</p>.<p>‘21ನೇ ಶತಮಾನವು ಸರ್ವರಿಗೂ ಒಳಿತಾಗಬಹುದೆಂಬ ವಿಶ್ವಾಸವಿದೆ. ಬುದ್ಧನ ಆದರ್ಶಗಳೊಂದಿಗೆ ಮಿಳಿತವಾಗಿರುವ ಎಳೆಯ ಮನಸ್ಸುಗಳು ಈ ಆಶಾವಾದಕ್ಕೆ ಕಾರಣ. ಬುದ್ಧನ ಬೋಧನೆಗಳು ಜಗತ್ತಿನ ಸುಸ್ಥಿರತೆಗೆ ಒತ್ತು ನೀಡುವ ರೀತಿಯಲ್ಲಿವೆ’ ಎಂದು ಹೇಳಿದರು.</p>.<p><strong>ಬೌದ್ಧ ಕ್ಷೇತ್ರಗಳ ಅಭಿವೃದ್ಧಿ: </strong>‘ಬೌದ್ಧ ಪರಂಪರೆಯ ಕ್ಷೇತ್ರಗಳಿಗೆ ಹೆಚ್ಚು ಜನರನ್ನು ಆಕರ್ಷಿಸುವುದು ಪ್ರಸ್ತುತ ಅಗತ್ಯವಾಗಿದೆ. ಭಾರತದಲ್ಲಿ ಇಂಥ ಹಲವು ಸ್ಥಳಗಳಿವೆ. ನನ್ನ ಲೋಕಸಭಾ ಕ್ಷೇತ್ರವನ್ನು ಜನರು ಸಾರನಾಥದಿಂದಲೂ ಗುರುತ್ತಿಸುತ್ತಾರೆ’ ಎಂದು ಮೋದಿ ಹೇಳಿದರು. ಸಾರನಾಥ, ವಾರಾಣಸಿ ಪಟ್ಟಣದಿಂದ 10 ಕಿ.ಮೀ.ದೂರವಿದೆ.</p>.<p>ಇತ್ತೀಚೆಗಷ್ಟೇ ಕೇಂದ್ರ ಸಂಪುಟವು, ಕುಶಿನಗರ ವಿಮಾನನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾರ್ಪಡಿಸಲಾಗುವುದು ಎಂದು ಪ್ರಕಟಿಸಿದ್ದನ್ನು ಪ್ರಸ್ತಾಪಿಸಿದ ಮೋದಿ, ಈ ಕ್ರಮದಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಯಾತ್ರಿಗಳು ದೇಶಕ್ಕೆ ಬರುತ್ತಾರೆ ಎಂದರು.</p>.<p>ಧಮ್ಮ ಅಥವಾ ಧರ್ಮ ಚಕ್ರ ದಿನವನ್ನು ಆಷಾಢ ಹುಣ್ಣಿಮೆಯಂದು ಆಚರಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ: </strong>'ಜಗತ್ತು ಇಂದು ಅಸಾಧಾರಣ ಸವಾಲುಗಳನ್ನು ಎದುರಿಸುತ್ತಿದ್ದು, ಇದರಿಂದ ಹೊರಬರುವ ಪರಿಹಾರ ಮಾರ್ಗಗಳು ಬುದ್ಧನ ಬೋಧನೆಗಳಲ್ಲಿ ಇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರತಿಪಾದಿಸಿದರು.</p>.<p class="title">ಧಮ್ಮ ಚಕ್ರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸಾರನಾಥದಲ್ಲಿ ಬುದ್ಧ ನೀಡಿದ ತನ್ನ ಮೊದಲ ಧರ್ಮೋಪದೇಶದಲ್ಲಿ ವಿಶ್ವಾಸ ಮತ್ತು ಸಂಕಲ್ಪಶಕ್ತಿಯ ಬಗ್ಗೆ ಪ್ರಸ್ತಾಪಿಸುತ್ತಾರೆ. ಇದು, ಮನುಷ್ಯನ ನೋವುಗಳನ್ನು ಶಮನಗೊಳಿಸುವ ಕ್ರಮವೇ ಆಗಿದೆ' ಎಂದು ಅಭಿಪ್ರಾಯಪಟ್ಟರು.</p>.<p class="title">'ನಾವು ಯಾವುದೇ ಸಂದರ್ಭ ಬಂದರೂ ಎದುರಿಸಲು ಸನ್ನದ್ಧರಾಗಬೇಕು. ಜನರಲ್ಲಿ ವಿಶ್ವಾಸವನ್ನು ಇಮ್ಮಡಿಸಲು ಏನು ಸಾಧ್ಯವೋ ಅದನ್ನು ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.</p>.<p class="title">‘ಭರವಸೆ, ಅನ್ವೇಷಣೆ, ಸಾಧನೆಗಳಿಂದ ಸಂಕಷ್ಟ ಶಮನ ಸಾಧ್ಯ ಎಂಬುದಕ್ಕೆ ಭಾರತದ ನವೋದ್ಯಮ ಕ್ಷೇತ್ರವು ಉತ್ತಮ ನಿದರ್ಶನ. ಯುವ ಪ್ರತಿಭಾವಂತರು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಭಾರತವು ಸ್ಟಾರ್ಟ್ ಅಪ್ ಕ್ಷೇತ್ರದ ಅತಿದೊಡ್ಡ ಕೇಂದ್ರವಾಗಿದೆ ಎಂದು ಹೇಳಿದರು.</p>.<p>ಬುದ್ಧನ ಅಷ್ಟಾಂಗ ಮಾರ್ಗಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ‘ಇವು ಹಲವು ಸಮಾಜ, ದೇಶಗಳಿಗೆ ಸನ್ನಡತೆಯ ಮಾರ್ಗಗಳಾಗಿವೆ. ಇವು ದಯಾಗುಣವನ್ನು ಎತ್ತಿಹಿಡಿದಿವೆ’ ಎಂದರು.</p>.<p>‘21ನೇ ಶತಮಾನವು ಸರ್ವರಿಗೂ ಒಳಿತಾಗಬಹುದೆಂಬ ವಿಶ್ವಾಸವಿದೆ. ಬುದ್ಧನ ಆದರ್ಶಗಳೊಂದಿಗೆ ಮಿಳಿತವಾಗಿರುವ ಎಳೆಯ ಮನಸ್ಸುಗಳು ಈ ಆಶಾವಾದಕ್ಕೆ ಕಾರಣ. ಬುದ್ಧನ ಬೋಧನೆಗಳು ಜಗತ್ತಿನ ಸುಸ್ಥಿರತೆಗೆ ಒತ್ತು ನೀಡುವ ರೀತಿಯಲ್ಲಿವೆ’ ಎಂದು ಹೇಳಿದರು.</p>.<p><strong>ಬೌದ್ಧ ಕ್ಷೇತ್ರಗಳ ಅಭಿವೃದ್ಧಿ: </strong>‘ಬೌದ್ಧ ಪರಂಪರೆಯ ಕ್ಷೇತ್ರಗಳಿಗೆ ಹೆಚ್ಚು ಜನರನ್ನು ಆಕರ್ಷಿಸುವುದು ಪ್ರಸ್ತುತ ಅಗತ್ಯವಾಗಿದೆ. ಭಾರತದಲ್ಲಿ ಇಂಥ ಹಲವು ಸ್ಥಳಗಳಿವೆ. ನನ್ನ ಲೋಕಸಭಾ ಕ್ಷೇತ್ರವನ್ನು ಜನರು ಸಾರನಾಥದಿಂದಲೂ ಗುರುತ್ತಿಸುತ್ತಾರೆ’ ಎಂದು ಮೋದಿ ಹೇಳಿದರು. ಸಾರನಾಥ, ವಾರಾಣಸಿ ಪಟ್ಟಣದಿಂದ 10 ಕಿ.ಮೀ.ದೂರವಿದೆ.</p>.<p>ಇತ್ತೀಚೆಗಷ್ಟೇ ಕೇಂದ್ರ ಸಂಪುಟವು, ಕುಶಿನಗರ ವಿಮಾನನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾರ್ಪಡಿಸಲಾಗುವುದು ಎಂದು ಪ್ರಕಟಿಸಿದ್ದನ್ನು ಪ್ರಸ್ತಾಪಿಸಿದ ಮೋದಿ, ಈ ಕ್ರಮದಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಯಾತ್ರಿಗಳು ದೇಶಕ್ಕೆ ಬರುತ್ತಾರೆ ಎಂದರು.</p>.<p>ಧಮ್ಮ ಅಥವಾ ಧರ್ಮ ಚಕ್ರ ದಿನವನ್ನು ಆಷಾಢ ಹುಣ್ಣಿಮೆಯಂದು ಆಚರಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>