<p><strong>ಕೊಲ್ಕತ್ತಾ:</strong> ಮೂರು ತಿಂಗಳ ಬಳಿಕ ಲಾಕ್ಡೌನ್ನಿಂದ ಮುಚ್ಚಲ್ಪಟ್ಟಿದ್ದ ಚಂದ್ರೋದಯ (ಇಸ್ಕಾನ್) ದೇವಾಲಯದ ದ್ವಾರ ಭಾನುವಾರ ಭಕ್ತರಿಗೆ ಮುಕ್ತವಾಗಿದೆ.</p>.<p>ಇದು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞೆ (ಇಸ್ಕಾನ್) ಸಂಸ್ಥೆಯ ಕೇಂದ್ರಸ್ಥಾನವೂ ಆಗಿದೆ.</p>.<p>ದೇವರ ದರ್ಶನ ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಿದ್ದು, ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸುವ ಸುರಂಗ ಮಾರ್ಗದ ಮೂಲಕ ಆವರಣವನ್ನು ಪ್ರವೇಶಿಸಲು ಅವಕಾಶ ಮಾಡಲಾಗಿದೆ. ಭಾನುವಾರ ಸುಮಾರು 100 ಭಕ್ತರು ದೇವರ ದರ್ಶನ ಪಡೆದರು ಎಂದು ಇಸ್ಕಾನ್ ವಕ್ತಾರಸುಬ್ರತಾ ದಾಸ್ ಅವರು ತಿಳಿಸಿದರು.</p>.<p>‘ಪ್ರತಿನಿತ್ಯ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ದೇವಸ್ಥಾನ ತೆರೆದಿರಲಿದೆ. ನಾವು 200 ಕ್ಕಿಂತ ಹೆಚ್ಚು ಭಕ್ತರು ಆಗಮಿಸಬಹುದು ಎಂಬ ನಿರೀಕ್ಷಿಸಿದ್ದೆವು. ಆದರೆ ಮುಂಬರುವ ದಿನಗಳಲ್ಲಿ ಹೆಚ್ಚು ಭಕ್ತರು ಆಗಮಿಸಬಹುದು. ಮಾಸ್ಕ್ ಧರಿಸಿದವರಿಗೆ ಮಾತ್ರ‘ಮುಖ್ಯ ದ್ವಾರ’ದ ಮೂಲಕ ಪ್ರವೇಶಿಸಲು ಅವಕಾಶ ಕಲ್ಪಿಸಿ ಕೊಡಲಾಗುತ್ತದೆ’ ಎಂದು ಅವರು ಹೇಳಿದರು.</p>.<p>ಪಶ್ಚಿಮ ಬಂಗಾಳ ಸರ್ಕಾರವು ಪೂಜಾ ಸ್ಥಳಗಳನ್ನು ತೆರೆಯಲು ಅವಕಾಶ ನೀಡಿದ ಒಂದು ತಿಂಗಳ ಬಳಿಕ ಚಂದ್ರೋದಯ ದೇವಸ್ಥಾನದ ದ್ವಾರಗಳನ್ನು ಭಕ್ತರಿಗಾಗಿ ತೆರೆಯಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲ್ಕತ್ತಾ:</strong> ಮೂರು ತಿಂಗಳ ಬಳಿಕ ಲಾಕ್ಡೌನ್ನಿಂದ ಮುಚ್ಚಲ್ಪಟ್ಟಿದ್ದ ಚಂದ್ರೋದಯ (ಇಸ್ಕಾನ್) ದೇವಾಲಯದ ದ್ವಾರ ಭಾನುವಾರ ಭಕ್ತರಿಗೆ ಮುಕ್ತವಾಗಿದೆ.</p>.<p>ಇದು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞೆ (ಇಸ್ಕಾನ್) ಸಂಸ್ಥೆಯ ಕೇಂದ್ರಸ್ಥಾನವೂ ಆಗಿದೆ.</p>.<p>ದೇವರ ದರ್ಶನ ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಿದ್ದು, ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸುವ ಸುರಂಗ ಮಾರ್ಗದ ಮೂಲಕ ಆವರಣವನ್ನು ಪ್ರವೇಶಿಸಲು ಅವಕಾಶ ಮಾಡಲಾಗಿದೆ. ಭಾನುವಾರ ಸುಮಾರು 100 ಭಕ್ತರು ದೇವರ ದರ್ಶನ ಪಡೆದರು ಎಂದು ಇಸ್ಕಾನ್ ವಕ್ತಾರಸುಬ್ರತಾ ದಾಸ್ ಅವರು ತಿಳಿಸಿದರು.</p>.<p>‘ಪ್ರತಿನಿತ್ಯ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ದೇವಸ್ಥಾನ ತೆರೆದಿರಲಿದೆ. ನಾವು 200 ಕ್ಕಿಂತ ಹೆಚ್ಚು ಭಕ್ತರು ಆಗಮಿಸಬಹುದು ಎಂಬ ನಿರೀಕ್ಷಿಸಿದ್ದೆವು. ಆದರೆ ಮುಂಬರುವ ದಿನಗಳಲ್ಲಿ ಹೆಚ್ಚು ಭಕ್ತರು ಆಗಮಿಸಬಹುದು. ಮಾಸ್ಕ್ ಧರಿಸಿದವರಿಗೆ ಮಾತ್ರ‘ಮುಖ್ಯ ದ್ವಾರ’ದ ಮೂಲಕ ಪ್ರವೇಶಿಸಲು ಅವಕಾಶ ಕಲ್ಪಿಸಿ ಕೊಡಲಾಗುತ್ತದೆ’ ಎಂದು ಅವರು ಹೇಳಿದರು.</p>.<p>ಪಶ್ಚಿಮ ಬಂಗಾಳ ಸರ್ಕಾರವು ಪೂಜಾ ಸ್ಥಳಗಳನ್ನು ತೆರೆಯಲು ಅವಕಾಶ ನೀಡಿದ ಒಂದು ತಿಂಗಳ ಬಳಿಕ ಚಂದ್ರೋದಯ ದೇವಸ್ಥಾನದ ದ್ವಾರಗಳನ್ನು ಭಕ್ತರಿಗಾಗಿ ತೆರೆಯಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>