ಸುದ್ದಿ ಸಂಸ್ಥೆ ಪಿಟಿಐ ಇತ್ತೀಚೆಗೆ ಚೀನಾದ ರಾಯಭಾರಿ ಸನ್ ವೀಸಾಂಗ್ ಅವರ ಸಂದರ್ಶನ ನಡೆಸಿತ್ತು. ಅಲ್ಲಿ ಅವರು ‘ಲಡಾಖ್ನಲ್ಲಿ ನಡೆದಿದ್ದ ಹಿಂಸಾತ್ಮಕ ಸಂಘರ್ಷಕ್ಕೆ ಭಾರತ ಸರ್ಕಾರವೇ ಹೊಣೆ’ ಎಂದು ಆರೋಪಿಸಿದ್ದರು. ಇದಾಗುತ್ತಿದ್ದಂತೆಯೇ, ಪಿಟಿಐ ಜತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಸರ್ಕಾರಿ ಸ್ವಾಮ್ಯದ ‘ಪ್ರಸಾರ ಭಾರತಿ’ ಸಂಸ್ಥೆಯು ಬೆದರಿಕೆ ಹಾಕಿತ್ತು.