ಚಂಡೀಗಡ: ಲಾಹೋರ್ನಲ್ಲಿರುವ ಪ್ರಸಿದ್ಧ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸುವ ಪಾಕಿಸ್ತಾನ ಸರ್ಕಾರದ ಕ್ರಮಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಹುತಾತ್ಮ ಭಾಯಿ ತಾರು ಸಿಂಗ್ ಜೀ ಅವರ ಪವಿತ್ರ ಸ್ಥಳವಾದಶ್ರೀ ಶಹೀದಿ ಅಸ್ತಾನ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸುವ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಪಾಕಿಸ್ತಾನದಲ್ಲಿರುವ ಎಲ್ಲಾ ಸಿಖ್ ಪೂಜ್ಯ ಸ್ಥಳಗಳನ್ನು ಕಾಪಾಡುವಂತೆ ಪಂಜಾಬ್ ಒತ್ತಾಯಿಸಿದೆ ಎಂಬುದನ್ನುಪಾಕಿಸ್ತಾನಕ್ಕೆ ತಿಳಿಯಪಡಿಸಿ’ ಎಂದು ಅಮರಿಂದರ್ ಸಿಂಗ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ಗೆ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.
ಪಾಕಿಸ್ತಾನದ ಈ ನಡೆಯ ವಿರುದ್ಧ ಸೋಮವಾರ ಭಾರತವು ತನ್ನ ರಾಯಭಾರಿ ಮೂಲಕ ಪ್ರತಿಭಟನೆ ದಾಖಲಿಸಿದೆ.