‘ರಾಜಕುಮಾರ್ ಅಹಿರವಾರ್ ಮತ್ತು ಅವರ ಪತ್ನಿ ಸಾವಿತ್ರಿ ಸರ್ಕಾರಕ್ಕೆ ಸೇರಿದ್ದ ಸ್ಥಳದಲ್ಲಿ ಬೆಳೆ ಬೆಳೆದಿದ್ದರು. ಆದರೆ, ಆ ಜಾಗವನ್ನು ಕಾಲೇಜಿಗಾಗಿ ಗೊತ್ತುಪಡಿಸಲಾಗಿತ್ತು. ಹಾಗಾಗಿ ಸ್ಥಳವನ್ನು ಖಾಲಿ ಮಾಡುವಂತೆ ನಾವು ಸೂಚಿಸಿದಾಗ ಪತಿ–ಪತ್ನಿ ಕೀಟನಾಶಕವನ್ನು ಕುಡಿದಿದ್ದಾರೆ. ದಂಪತಿ ಆಸ್ಪತ್ರೆಗೆ ಬರಲು ಒಪ್ಪದಿದ್ದಾಗ ಅವರಿಬ್ಬರನ್ನು ಬಲವಂತವಾಗಿ ಕರೆದುಕೊಂಡು ಹೋಗಬೇಕಾಯಿತು ಎಂದು ಜಿಲ್ಲಾಧಿಕಾರಿ ಎಸ್. ವಿಶ್ವನಾಥನ್ ಅವರು ತಿಳಿಸಿದರು.