ಗಜೇಂದ್ರಸಿಂಗ್ ಹಾಗೂ ಕಾಂಗ್ರೆಸ್ನ ಬಂಡಾಯ ಶಾಸಕ ಭವರ್ಲಾಲ್ ಶರ್ಮಾ ಅವರ ನಡುವೆ ನಡೆದ ಮಾತುಕತೆಯದ್ದು ಎನ್ನಲಾದ ಎರಡು ಧ್ವನಿಮುದ್ರಿಕೆಗಳನ್ನು ಈಚೆಗೆ ಬಿಡುಗಡೆ ಮಾಡಿರುವ ಕಾಂಗ್ರೆಸ್, ‘ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೊಟ್ ನೇತೃತ್ವದ ಸರ್ಕಾರವನ್ನು ಉರುಳಿಸುವಲ್ಲಿ ಕೇಂದ್ರದ ಸಚಿವರ ಕೈವಾಡವಿದೆ’ ಎಂದು ಆರೋಪಿಸಿತ್ತು.