ಸಾವಳಗಿ: ಗ್ರಾಮದ ಉಪ ತಹಶೀಲ್ದಾರ್ ಕಚೇರಿಯಲ್ಲಿ ಡಾ.ಬಾಬುಜಗಜೀವನ್ರಾಂ ಅವರ ಜಯಂತಿ ಆಚರಣೆ ಮಾಡಲಾಯಿತು.ಉಪ ತಹಶೀಲ್ದಾರ್ ವೈ.ಎಚ್.ದ್ರಾಕ್ಷಿ ಮಾತನಾಡಿ, ‘ಬಡ ವರ್ಗದ ಜನರ ಹಸಿವನ್ನು ನೀಗಿಸಿದ ಶ್ರೇಯ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಂ ಅವರಿಗೆ ಸಲ್ಲಬೇಕು’ ಎಂದು ಹೇಳಿದರು.‘ದೇಶದ ಬಡವರ ಏಳಿಗೆಗೆ ನಿರಂತರ ಹೋರಾಟ ನಡೆಸಿದರು. ಅಸ್ಪ್ರಶ್ಯತೆ ಹೋಗಲಾಡಿಸಲು ಗಾಂಧೀಜಿ ಜತೆ ಕೈ ಜೋಡಿಸಿ ಹೋರಾಟ ಮಾಡಿದರು’ ಎಂದರು. ಗ್ರಾಮಲೆಕ್ಕಾಧಿಕಾರಿ ಆನಂದ ರಾಠೋಡ, ಕೃಷಿ ಅಧಿಕಾರಿ ಬಿ.ಜೆ.ಮಾಳೆದ, ಪ್ರಮುಖರಾದ ರಾಮಣ್ಣಾ ಬಂಡಿವಡ್ಡರ, ಕಲ್ಲಪ್ಪ ನಾಂದ್ರೇಕರ, ರವಿ ಐಹೊಳ್ಳಿ, ಚಂದು ಮಾದರ ಹಾಜರಿದ್ದರು.