‘ನಗರದಲ್ಲಿ ಹಸಿ ಹಾಗೂ ಒಣ ಕಸವನ್ನು ಮೂಲದಲ್ಲೇ ಬೇರ್ಪಡಿಸಿ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮನೆ–ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೆ, ಒಣ ಎಲೆಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ಇರಲಿಲ್ಲ. ಇದರಿಂದ ಅವುಗಳು ವ್ಯರ್ಥವಾಗುತ್ತಿದ್ದವು. ಅವುಗಳಿಂದ ಉತ್ತಮವಾದ ಗೊಬ್ಬರ ತಯಾರಿಕೆಗೆ ಅವಕಾಶವಿದೆ. ಹೀಗಾಗಿ, ಅಲ್ಲಲ್ಲಿ ಸಂಗ್ರಹಿಸಲಾಗುತ್ತಿದೆ. ಅವುಗಳು ಕೊಳೆತು ಗೊಬ್ಬರವಾದ ನಂತರ, ಅದನ್ನು ನಗರದಾದ್ಯಂತ ಇರುವ ಉದ್ಯಾನಗಳು, ಗಿಡ–ಮರಗಳಿಗೆ ಬಳಸಲಾಗುವುದು’ ಎಂದು ಆಯುಕ್ತ ಕೆ.ಎಚ್. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.