<p><strong>ಬೆಂಗಳೂರು:</strong> ಕುವೆಂಪು ಮತ್ತು ದೇ.ಜವರೇಗೌಡ ಒಂದೇ ಶಕ್ತಿಯ ಎರಡು ಮುಖಗಳು. ಅವರನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.</p>.<p>ಕುವೆಂಪು ಕಲಾನಿಕೇತನ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಕುವೆಂಪು ಮತ್ತು ದೇಜಗೌ ಗುರು-ಶಿಷ್ಯರ ನೆನಪಿನ ಕಾರ್ಯಕ್ರಮ’ದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.</p>.<p>‘ಕನ್ನಡದ ಹೆಸರನ್ನು ಬಳಸಿಕೊಳ್ಳುವ ಸುಖಪುರುಷರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಆದರೆ, ಕುವೆಂಪು ಕನ್ನಡದ ಯುಗಪುರುಷರಾದರೆ ದೇಜಗೌ ಶಕಪುರುಷರು’ ಎಂದರು.</p>.<p>‘ಕುವೆಂಪು ಇಂಗ್ಲಿಷ್ ಮೂಲಕ ಕನ್ನಡ ಪ್ರವೇಶಿಸಿದರೆ, ದೇಜಗೌ ಕನ್ನಡತನದಿಂದ ಭಾಷೆಯನ್ನು ಸಮೃದ್ಧವಾಗಿ ಕಟ್ಟಿದರು. ಈ ಇಬ್ಬರೂ ಸೀಮಾತೀತರು’ ಎಂದರು.</p>.<p>‘ಸಾಹಿತ್ಯ, ಸಂಸ್ಕೃತಿ ಮತ್ತು ಜನಪದ ಕ್ಷೇತ್ರಗಳಿಗೆ ದೇಜಗೌ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕುವೆಂಪು ಒಂದೆಡೆ ಕುಳಿತು ಸ್ಥಾಯಿಯಾಗಿ ಸಾಹಿತ್ಯ ಕೃಷಿ ಮಾಡಿದರೆ, ದೇಜಗೌನಾಡು ಸುತ್ತುತ್ತಲೇ ಜಂಗಮನಂತೆ ಕನ್ನಡ ಕಟ್ಟಿದರು’ ಎಂದು ಸ್ಮರಿಸಿದರು.</p>.<p>ಹಿರಿಯ ಸಾಹಿತಿ ಡಾ. ಮಳಲಿ ವಸಂತಕುಮಾರ್, ಕುವೆಂಪು ಕಲಾನಿಕೇತನದ ಅಧ್ಯಕ್ಷ ಡಿ. ಪ್ರಕಾಶ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕುವೆಂಪು ಮತ್ತು ದೇ.ಜವರೇಗೌಡ ಒಂದೇ ಶಕ್ತಿಯ ಎರಡು ಮುಖಗಳು. ಅವರನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.</p>.<p>ಕುವೆಂಪು ಕಲಾನಿಕೇತನ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಕುವೆಂಪು ಮತ್ತು ದೇಜಗೌ ಗುರು-ಶಿಷ್ಯರ ನೆನಪಿನ ಕಾರ್ಯಕ್ರಮ’ದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.</p>.<p>‘ಕನ್ನಡದ ಹೆಸರನ್ನು ಬಳಸಿಕೊಳ್ಳುವ ಸುಖಪುರುಷರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಆದರೆ, ಕುವೆಂಪು ಕನ್ನಡದ ಯುಗಪುರುಷರಾದರೆ ದೇಜಗೌ ಶಕಪುರುಷರು’ ಎಂದರು.</p>.<p>‘ಕುವೆಂಪು ಇಂಗ್ಲಿಷ್ ಮೂಲಕ ಕನ್ನಡ ಪ್ರವೇಶಿಸಿದರೆ, ದೇಜಗೌ ಕನ್ನಡತನದಿಂದ ಭಾಷೆಯನ್ನು ಸಮೃದ್ಧವಾಗಿ ಕಟ್ಟಿದರು. ಈ ಇಬ್ಬರೂ ಸೀಮಾತೀತರು’ ಎಂದರು.</p>.<p>‘ಸಾಹಿತ್ಯ, ಸಂಸ್ಕೃತಿ ಮತ್ತು ಜನಪದ ಕ್ಷೇತ್ರಗಳಿಗೆ ದೇಜಗೌ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕುವೆಂಪು ಒಂದೆಡೆ ಕುಳಿತು ಸ್ಥಾಯಿಯಾಗಿ ಸಾಹಿತ್ಯ ಕೃಷಿ ಮಾಡಿದರೆ, ದೇಜಗೌನಾಡು ಸುತ್ತುತ್ತಲೇ ಜಂಗಮನಂತೆ ಕನ್ನಡ ಕಟ್ಟಿದರು’ ಎಂದು ಸ್ಮರಿಸಿದರು.</p>.<p>ಹಿರಿಯ ಸಾಹಿತಿ ಡಾ. ಮಳಲಿ ವಸಂತಕುಮಾರ್, ಕುವೆಂಪು ಕಲಾನಿಕೇತನದ ಅಧ್ಯಕ್ಷ ಡಿ. ಪ್ರಕಾಶ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>