ಗಜೇಂದ್ರಗಡ: ಪಟ್ಟಣದ ಆಯಕಟ್ಟಿನ ಸ್ಥಳವಾದ ಕಾಲಕಾಲೇಶ್ವರ ವೃತ್ತದಿಂದ ಟಿಟಿಡಿ ಕಲ್ಯಾಣ ಮಂಟಪದವರೆಗಿನ ಸಿ.ಸಿ.ರಸ್ತೆ ಕಾಮಗಾರಿ, ದುರ್ಗಾ ವೃತ್ತದಿಂದ ಜಗದಂಬಾ ಕಲ್ಯಾಣ ಮಂಟಪದವರೆಗಿನ ರಸ್ತೆ ಡಾಂಬರೀಕರಣ ಸ್ಥಗಿತಗೊಂಡದ್ದರಿಂದ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
‘ಗುತ್ತಿಗೆದಾರರು ರಸ್ತೆಯನ್ನು ಅಗೆದು, ಗರಸ ಹಾಕಿ ಹೋದವರು ನಾಪತ್ತೆಯಾಗಿದ್ದಾರೆ. ಪುರಸಭೆ ಈ ಕುರಿತು ನಿರ್ಲಕ್ಷ್ಯ ವಹಿಸಿದ್ದರಿಂದ ನಿತ್ಯ ಹಿಂಸೆ ಅನುಭವಿಸುವಂತಾಗಿದೆ’ ಎಂದು ಪುರಸಭೆ ಸದಸ್ಯ ಅಶೋಕ ವನ್ನಾಲ ಮತ್ತು ಮುಖಂಡ ರವಿ ಗಡೇದವರ ಆರೋಪಿಸಿದ್ದಾರೆ.
‘ಜನರಿಗೆ ತೊಂದರೆ ಆಗದಂತೆ ಕೆಲಸವನ್ನು ಬೇಗ ಮುಗಿಸಲು ಗುತ್ತಿಗೆದಾರರಿಗೆ ತಿಳಿಸಿದ್ದೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಹೇಳಿದರು.