‘ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಿಂದ ದೆಹಲಿಗೆ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದ ನನ್ನ ತಾಯಿ ಅತ್ಯಂತ ಆಘಾತಕಾರಿ ಘಟನೆಯನ್ನು ಎದುರಿಸಿದ್ದಾರೆ. ಊಟ ಮುಗಿಸಿ ತೆರಳುತ್ತಿದ್ದ ವೇಳೆ ವ್ಯಕ್ತಿಯೋರ್ವ ಅವರ ಸೀಟ್(36D) ಮೇಲೆ ಮೂತ್ರ ವಿಸರ್ಜಿಸಿದ್ದಾರೆ. ದಯವಿಟ್ಟು ತಕ್ಷಣ ಗಮನಹರಿಸಿ’ ಎಂದು ತಿಳಿಸಿದ್ದು, ಟ್ವೀಟ್ ಜೊತೆಗೆ ವಿಮಾನಯಾನ ಸಚಿವ ಸುರೇಶ್ ಪ್ರಭು, ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಏರ್ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ.