ಹಸ್ತಾಂತರವಾದ ಬಳಿಕ ಅಟ್ಟಾರಿ ಗಡಿಯ ಬಳಿ ಸುದ್ದಿಗೋಷ್ಠಿ ನಡೆಸಿದ ಅವರು, ಅಭಿನಂದನ್ ಅವರನ್ನುಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಪ್ಯಾರಾಚೂಟ್ ಮೂಲಕ ವಿಮಾನದಿಂದ ಜಿಗಿದ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಅಗತ್ಯವಿದೆ ಎಂದರು.
ನಿರ್ಮಲಾ ಸ್ವಾಗತ: ಅಭಿನಂದನ್ ಭಾರತದ ಭೂಪ್ರದೇಶಕ್ಕೆ ಕಾಲಿಟ್ಟ ಬೆನ್ನಲ್ಲೇ ಆ ಕುರಿತು ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಹರ್ಷ ವ್ಯಕ್ತಪಡಿಸಿದ್ದು, ‘ಜೈ ಹಿಂದ್’ ಎಂದು ಟ್ವೀಟ್ ಮಾಡಿದ್ದಾರೆ.
Proud of you Wing Commander #AbhinandanVarthaman. The entire nation appreciates your valour and grit. You held your calm in the face of adversity. You are an inspiration to our youth. Salute. Vande Mataram.
‘ವಿಂಗ್ ಕಮಾಂಡರ್ ಅಭಿನಂದನ್ ನಿಮ್ಮ ಬಗ್ಗೆ ಹೆಮ್ಮೆ ಇದೆ. ನಿಮ್ಮ ಶೌರ್ಯ, ಸಾಹಸವನ್ನುಈಡೀ ದೇಶ ಕೊಂಡಾಡುತ್ತಿದೆ. ನೀವು ನಮ್ಮ ಯುವಜನತೆಗೆ ಸ್ಫೂರ್ತಿ, ನಿಮಗೊಂದು ಸೆಲ್ಯೂಟ್, ವಂದೇ ಮಾತರಂ’ ಎಂದು ಮತ್ತೊಂದು ಟ್ವೀಟ್ನಲ್ಲಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.