ಮುಂಬೈ: ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ಉತ್ತರ ಪ್ರದೇಶದ 1,398 ರೈತರ ₹4.05 ಕೋಟಿ ಸಾಲ ತೀರಿಸಿದ್ದಾರೆ.
ಸೋಮವಾರ ರಾತ್ರಿ ತಮ್ಮ ಬ್ಲಾಗ್ನಲ್ಲಿ ಈ ವಿಷಯ ತಿಳಿಸಿರುವ ಅವರು, ಆಯ್ದ 70 ರೈತರನ್ನು ಮುಂಬೈಗೆ ಆಹ್ವಾನಿಸಿ ಚೆಕ್ ನೀಡಿದ್ದನ್ನು ಉಲ್ಲೇಖಿಸಿದ್ದಾರೆ.ಈ ಮೊದಲು ಅವರು ಮಹಾರಾಷ್ಟ್ರದ 350 ರೈತರ ಸಾಲ ತೀರಿಸಲು ನೆರವಾಗಿದ್ದರು.
‘ಅಂದುಕೊಂಡಿದ್ದು ಈಡೇರಿದಾಗ ಮನಸಿನಲ್ಲಿ ಶಾಂತಿ ನೆಲೆಸಿದೆ’ ಎಂದು ಅಮಿತಾಭ್ ಬರೆದಿದ್ದಾರೆ.