ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ: ಪ್ರತಿಭಟನೆಗೆ ಪಿಎಫ್‌ಐ ಹಣ ಬಳಕೆ

ಇ.ಡಿ ತನಿಖೆಯಲ್ಲಿ ಬಹಿರಂಗ: ಆರೋಫ ಅಲ್ಲಗಳೆದ ಪಿಎಫ್‌ಐ, ಸಿಬಲ್
Last Updated 27 ಜನವರಿ 2020, 19:53 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೂ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಗೂ ‘ಹಣಕಾಸು ಸಂಬಂಧವಿದೆ‘ ಎಂದು ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.

ಸಂಸತ್ತಿನಲ್ಲಿ ಸಿಎಎ ಮಸೂದೆಗೆ ಅನುಮೋದನೆ ದೊರೆತ ನಂತರ ಉತ್ತರ ಪ್ರದೇಶದಲ್ಲಿ ಬ್ಯಾಂಕ್‌ನ ವಿವಿಧ ಖಾತೆಗಳಿಗೆ ₹120.5 ಕೋಟಿ ಜಮೆಯಾಗಿದೆ ಎಂದೂ ಇ.ಡಿ ಗುರುತಿಸಿದೆ. ‘ಇದು, ಆಧಾರರಹಿತ ಆರೋಪ’ ಎಂದು ಪಿಎಫ್‌ಐ ತಳ್ಳಿಹಾಕಿದೆ.

ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ 2018ರಿಂದಲೂ ಕೇರಳ ಮೂಲದ ಪಿಎಫ್‌ಐ ಸಂಘಟನೆಯ ವಿರುದ್ಧ ಇ.ಡಿ ತನಿಖೆ ನಡೆಸುತ್ತಿದೆ. ಖಾತೆಗಳಿಗೆ ನಗದು, ಆರ್‌ಟಿಜಿಎಸ್‌ ಮೂಲಕ ಹಣ ಜಮೆ ಆಗಿದೆ. ಆಗಾಗ್ಗೆ ಚೆಕ್‌ ಮೂಲಕ ಜಮೆಯಾಗಿದೆ ಎಂದು ಹೇಳಿದೆ. ಉತ್ತರ ಪ್ರದೇಶದಲ್ಲಿ ಸಿಂಡಿಕೇಟ್‌ ಬ್ಯಾಂಕ್‌ನ ನೆಹರೂ ಪ್ಲೇಸ್‌ ಶಾಖೆಯಲ್ಲಿರುವ ಪಿಎಫ್‌ಐ ಖಾತೆಗೆ ದೊಡ್ಡ ಪ್ರಮಾಣದಲ್ಲಿ ಸಾಕಷ್ಟು ಬಾರಿ ಹಣ ಜಮೆಯಾಗಿರುವ ದಾಖಲೆ ಇದೆ. ಬಹರೀಚ್, ಬಿಜ್ನೂರ್, ಹಪುರ್, ಶಾಮ್ಲಿ ಮತ್ತು ದಸ್ನಾದ ಶಾಖೆಗಳ ಖಾತೆಗಳಲ್ಲೂ ಇದೇ ಸ್ಥಿತಿ ಇದೆ. ಬ್ಯಾಂಕ್‌ನ ಕೋಜಿಕ್ಕೊಡ್‌ ಶಾಖೆಯಲ್ಲಿರುವ ಪಿಎಫ್‌ಐ ಖಾತೆ ಪರಿಶೀಲಿಸಿದಾಗ ಹಿರಿಯ ವಕೀಲ, ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌, ವಕೀಲರಾದ ಇಂದಿರಾ ಜೈಸಿಂಗ್, ದುಶ್ಯಂತ್‌ ಎ ದವೆ ಅವರಿಗೆ ಹಣ ಪಾವತಿಸಿರುವುದು ಗೊತ್ತಾಗಿದೆ ಎಂದು ಇ.ಡಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT