‘ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಕರ್ನಾಟಕದ ಜನರು ಶ್ರೀಮಂತರಾಗಿದ್ದಾರೆ’ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಪಿ. ಚಿದಂಬರಂ ಪ್ರತಿಪಾದಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಮೇ 9).
ಪತ್ರಿಕೆಯ ಎರಡನೇ ಪುಟದಲ್ಲಿ, ‘ಶಾಸಕರ ಸರಾಸರಿ ಆಸ್ತಿ ₹17 ಕೋಟಿ ಹೆಚ್ಚಳ’ ಎಂಬ ವರದಿ ಅಂಕಿಅಂಶಗಳ ಸಮೇತ ಪ್ರಕಟವಾಗಿದೆ. ಎರಡನ್ನೂ ಓದಿದರೆ, ನಿಜಕ್ಕೂ ಧನಿಕರಾಗಿರುವವರು ಯಾರು ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ.