‘ಜನರನ್ನು ತಪ್ಪದಾರಿಯಲ್ಲಿ ಮುನ್ನಡೆಸುವವನುನಾಯಕನಾಗುವುದಿಲ್ಲ.ಸಿಎಎ ವಿರುದ್ಧ ನಡೆದ ಪ್ರತಿಭಟನೆಗಳನ್ನು ಕಂಡಿದ್ದೇವೆ.ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಬಹಳಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಹಿಂಸಾತ್ಮಕ ಕೃತ್ಯಕ್ಕಾಗಿಜನರನ್ನುಬಳಸಿಕೊಂಡಿದ್ದಾರೆ. ಇದನ್ನು ನಾಯಕತ್ವ ಎನ್ನವುದಿಲ್ಲ’ ಎಂದು ಹೇಳಿದ್ದಾರೆ.
‘ನಾಯಕತ್ವದಲ್ಲಿ ಮುಂದಾಳತ್ವ ವಹಿಸುವುದು ಸುಲಭದ ಕೆಲಸವಲ್ಲ. ನೀವು ಇಡುವ ಒಂದು ಹೆಜ್ಜೆಯನ್ನು, ಹಿಂದಿರುವ ಸಮೂಹ ಹಿಂಬಾಲಿಸುತ್ತದೆ. ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ನಾಯಕನ ಮೇಲಿರುತ್ತದೆ. ಹಾಗಾಗಿ ನಾಯಕತ್ವ ಎನ್ನುವುದುಕಾಣಿಸುವಷ್ಟು ಸುಲಭದ ಕೆಲಸವಲ್ಲ’ ಎಂದು ತಿಳಿಸಿದರು.
ಸೇನಾ ಮುಖ್ಯಸ್ಥರ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಎಐಎಂಇಐಎಂ ಮುಖ್ಯಸ್ಥ ಅಸಾದುದ್ದೀನ್ಓವೈಸಿ, ಸೇನಾ ಮುಖ್ಯಸ್ಥರಿಗೆ ನಾಯಕತ್ವದ ಪಾಠ ಮಾಡಿದ್ದಾರೆ.