ಮುಂಬೈ: ಜೆಎನ್ಯು ವಿದ್ಯಾರ್ಥಿಗಳ ಮೇಲೆ ನಡೆಸಿರುವ ದಾಳಿಯು 26/11ರ ಮುಂಬೈ ಉಗ್ರರ ದಾಳಿಯನ್ನು ನೆನಪಿಸುವಂತಿದೆ. ಮುಸುಕುಧಾರಿಗಳಾಗಿ ಕಬ್ಬಿಣದ ರಾಡ್ ಹಿಡಿದು ದಾಳಿ ನಡೆಸಿರುವುದು ಹೇಡಿಗಳ ಕೃತ್ಯ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶೀಘ್ರವಾಗಿ ಮತ್ತು ನಿರ್ಣಾಯಕವಾಗಿ ಕ್ರಮಕೈಗೊಳ್ಳಬೇಕು. ಕಳೆದ ತಿಂಗಳಷ್ಟೇ ದೆಹಲಿಯಜಾಮಿಯಾಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡು ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದರೂ ಕೂಡ ಈ ಬಾರಿ ಘಟನೆಯನ್ನು ತಡೆಯಲು ಪೊಲೀಸರು ವಿಫಲವಾಗಿದ್ದಾರೆ ಎಂದು ದೂರಿದರು.
#WATCH Maharashtra Chief Minister Uddhav Thackeray on JNU violence: What was the need for attackers to wear masks? They were cowards. I was watching on TV and it reminded me of the 26/11 Mumbai terror attack. I will not tolerate such attacks in Maharashtra pic.twitter.com/LR1kpctk8K
— ANI (@ANI) January 6, 2020
ಜೆಎನ್ಯು ದಾಳಿಯನ್ನು ಖಂಡಿಸಿ ಅಪಾರ ಸಂಖ್ಯೆಯಲ್ಲಿ ರಸ್ತೆಗಿಳಿದಿರುವ ಮಹಾರಾಷ್ಟ್ರದ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಅವರು, ನಮ್ಮ ಸರ್ಕಾರವು ಈ ರೀತಿಯ ಕೃತ್ಯಗಳನ್ನು ಸಹಿಸುವುದಿಲ್ಲ. ನಿಮ್ಮ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಅವರ ಒಂದು ತಲೆ ಕೂದಲನ್ನು ಕೂಡ ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲ. ಕಾನೂನು ಮುರಿಯುವವರ ವಿರುದ್ಧ ತಕ್ಕ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಭಾನುವಾರ ರಾತ್ರಿ ಜೆಎನ್ಯು ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯು 26/11ರ ಮುಂಬೈ ಉಗ್ರ ದಾಳಿಯನ್ನು ನೆನಪಿಸಿದೆ. ದೇಶದಲ್ಲಿ ವಿದ್ಯಾರ್ಥಿಗಳು ಅಸುರಕ್ಷತೆಯನ್ನು ಎದುರಿಸುತ್ತಿದ್ದಾರೆ. ಜೆಎನ್ಯು ರೀತಿಯಲ್ಲಿ ಮಹಾರಾಷ್ಟ್ರದಲ್ಲಿ ಘಟನೆಗಳು ನಡೆಯಲು ನಾನು ಬಿಡುವುದಿಲ್ಲ. ಯುವಜನತೆ ಭಯ ಮತ್ತು ಕೋಪಗೊಂಡಿದ್ದಾರೆ. ನಮ್ಮ ಯುವಜನತೆ ಹೇಡಿಗಳಲ್ಲ ಎಂದು ಹೇಳಿದರು.
I want to assure the youth of Maharashtra that I won’t let anything happen to them & they are completely safe. There will be serious repercussions if anyone tries to repeat what happened last night in the JNU campus in Maharashtra.
— Office of Uddhav Thackeray (@OfficeofUT) January 6, 2020
-CM Uddhav Balasaheb Thackeray pic.twitter.com/HWRisYgocZ
ವಿದ್ಯಾರ್ಥಿಗಳನ್ನು ಪ್ರಚೋದಿಸಿ ಬೆಂಕಿ ಹಚ್ಚುವ ಕೆಲಸವನ್ನು ಮಾಡಬೇಡಿ. ದಾಳಿಯ ಹಿಂದಿನ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ದೆಹಲಿ ಪೊಲೀಸರು ವಿಫಲರಾದರೆ ಅವರು ಕೂಡ ಘಟನೆ ಹಿಂದಿರುತ್ತಾರೆ. ಈ ಮುಸುಕಿನ ಹಿಂದೆ ಯಾರಿದ್ದಾರೆ ಎಂಬುದನ್ನು ನಾವು ತಿಳಿಯಬೇಕಿದೆ. ಮುಸುಕುಧಾರಿಗಳಾಗಿ ಬಂದಿದ್ದವರು ಹೇಡಿಗಳು. ಅವರಿಗೆ ತಾಕತ್ತು ಇದ್ದದ್ದೇ ಆದರೆ ನೇರವಾಗಿ ಬರಲಿ. ಇಂತಹ ಹೇಡಿಗಳ ಕೃತ್ಯವನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.