ಕೊಲ್ಕತ್ತಾ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿರುವುದಕ್ಕೆ ಪಶ್ಚಿಮಬಂಗಾಳಬಿಜೆಪಿಘಟಕವು ಗೃಹ ಸಚಿವ ಅಮಿತ್ಶಾಅವರನ್ನು ಮಾರ್ಚ್ 1ರಂದು ಸನ್ಮಾನಿಸಲಿದೆ. ಬಳಿಕ ಗೃಹ ಸಚಿವರು ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ರ್ಯಾಲಿಯು ಶಹೀದ್ಮಿನಾರ್ಮೈದಾನದಲ್ಲಿ ನಡೆಯಲಿದೆ.
ಅಮಿತ್ಶಾಅವರನ್ನು ಸನ್ಮಾನಿಸಲಾಗುವುದು. ಬಳಿಕ ಅವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಸಿಎಎಗೆಇರುವ ಭರ್ಜರಿ ಜನ ಬೆಂಬಲ ವ್ಯಕ್ತವಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಅಮಿತ್ಶಾಈ ಮೊದಲು ಪಶ್ಚಿಮ ಬಂಗಾಳಕ್ಕೆ ಅಕ್ಟೋಬರ್ 1ರಂದು ಭೇಟಿನೀಡಿದ್ದು, ಪೌರತ್ವ ತಿದ್ದುಪಡಿ ಕಾಯ್ದೆಗೆಸಂಬಂಧಿಸಿದಂತೆನೇತಾಜಿಒಳಾಂಗಣಕ್ರೀಡಾಂಗಣದಲ್ಲಿ ನಡೆದ ಸೆಮಿನಾರ್ನಲ್ಲಿ ಭಾಗವಹಿಸಿದ್ದರು
ಮಸೂದೆಯನ್ನು ಸಂಸತ್ತು ಅಂಗೀಕರಿಸಿದ್ದು ರಾಷ್ಟ್ರಪತಿಯವರ ಅಂಕಿತದೊಂದಿಗೆ ಕಾಯ್ದೆಯಾಗಿ ಬದಲಾಯಿತು.
ಪೌರತ್ವ ತಿದ್ದುಪಡಿ ಕಾಯ್ದೆಯುಬಂಗಾಳದಲ್ಲಿ ಹೊಸ ಚರ್ಚೆಯನ್ನುಹುಟ್ಟುಹಾಕಿದ್ದು, ತೃಣಮೂಲ ಕಾಂಗ್ರೆಸ್ ಈ ಕಾಯ್ದೆಯನ್ನುಕಟುವಾಗಿ ಟೀಕಿಸಿ ತೀವ್ರವಾಗಿ ವಿರೋಧಿಸಿದ್ದವು , ಅದನ್ನು ಜಾರಿಗೆ ತರಲು ಬಿಜೆಪಿಯು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದೆ.