ಬೆಂಗಳೂರು: ವಿಶ್ವಾಸಮತ ಯಾಚನೆಯಿಂದ ಹಿಂದೆ ಸರಿದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ 55 ಗಂಟೆಗಳ ಬಿಎಸ್ವೈ ಆಡಳಿತ ಅಂತ್ಯವಾಗಿದೆ. ಇನ್ನು ಕಾಂಗ್ರೆಸ್ನ ಸಂಪೂರ್ಣ ಬೆಂಬಲ ಪಡೆದಿರುವ ಜೆಡಿಎಸ್ ಸರ್ಕಾರ ರಚನೆಯ ಕಸರತ್ತು ಮುಂದುವರಿಸಿದೆ.
2018ರ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ, ಬುಧವಾರ(ಮೇ 16) ದಿಂದ ಶನಿವಾರದವರೆಗೂ ರಾಜಕೀಯ ವಲಯದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳ ಪಟ್ಟಿ ಇಲ್ಲಿದೆ.
</p><p><strong>2018, ಮೇ 16(ಬುಧವಾರ)</strong></p><p>* ಸಂಜೆ 5:00– ರಾಜಭವನಕ್ಕೆ ಎಚ್.ಡಿ.ಕುಮಾರಸ್ವಾಮಿ ಪ್ರವೇಶಕ್ಕೆ ಸಿಗಲಿಲ್ಲ ಅನುಮತಿ. ಜೆಡಿಎಸ್ ಬೆಂಬಲಿಗರ ಪ್ರತಿಭಟನೆ.<br/> * ಸಂಜೆ 5:20– ರಾಜಭವನದಲ್ಲಿ ರಾಜ್ಯಪಾಲರಿಗೆ ಕಾಂಗ್ರೆಸ್–ಜೆಡಿಎಸ್ ಶಾಸಕರ ಸಹಿ ಒಳಗೊಂಡ ಪಟ್ಟಿ ಸಲ್ಲಿಕೆ. ಸರ್ಕಾರ ರಚಿಸಲು ಅವಕಾಶ ಕೋರಿ ಮನವಿ. ಸಾಂವಿಧಾನಿಕವಾಗಿ ತೀರ್ಮಾನ ಕೈಗೊಳ್ಳುವುದಾಗಿ ರಾಜ್ಯಪಾಲರ ಭರವಸೆ.<br/> * ಸಂಜೆ 6:00– ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕರ ಸಭೆ<br/> * ಸಂಜೆ 7:30– ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ಗೆ ಬಸ್ನಲ್ಲಿ ಕಾಂಗ್ರೆಸ್ ಶಾಸಕರ ಪ್ರಯಾಣ</p><p><img alt="" src="https://cms.prajavani.net/sites/pv/files/article_images/2018/05/19/7fa502c4-3424-442e-afa0-4a1fb150a639(1).jpg" style="width: 600px; height: 338px;" data-original="/http://www.prajavani.net//sites/default/files/images/7fa502c4-3424-442e-afa0-4a1fb150a639(1).jpg"/></p><p>* ರಾತ್ರಿ 8:00– ಯಡಿಯೂರಪ್ಪ ಗುರುವಾರ 9:30ಕ್ಕೆ ಪ್ರಮಾಣ ವಚನ ಸ್ವೀಕಾರ: ಬಿಜೆಪಿ ಮುಖಂಡ ಸುರೇಶ್ ಕುಮಾರ್ ಹಾಗೂ ಬಿಜೆಪಿ ಕರ್ನಾಟಕ ಟ್ವೀಟ್<br/> * ಕಾಂಗ್ರೆಸ್ನಿಂದ ಫೋನ್ ಟ್ಯಾಪ್: ಶೋಭಾ ಕರಂದ್ಲಾಜೆ ಸೇರಿ ಬಿಜೆಪಿಯ ಮೂವರು ಸಚಿವರಿಂದ ಕೇಂದ್ರ ಗೃಹ ಸಚಿವರಿಗೆ ಪತ್ರ<br/> * ರಾತ್ರಿ 8:30– ಫೋನ್ ಟ್ಯಾಪ್, ಐಟಿ ದಾಳಿ, ಕುದುರೆ ವ್ಯಾಪರದ ವಿಚಾರವಾಗಿ ಬಿಜೆಪಿ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ</p><p><img alt="" src="https://cms.prajavani.net/sites/pv/files/article_images/2018/05/19/HDK(1)(1).jpg" style="width: 600px; height: 432px;" data-original="/http://www.prajavani.net//sites/default/files/images/HDK(1)(1).jpg"/></p><p>* ರಾತ್ರಿ 8:45– ರೆಸಾರ್ಟ್ ತಲುಪಿದ ಶಾಸಕರು<br/> * ರಾತ್ರಿ 9:00– ಗುರುವಾರ ಯಡಿಯೂರಪ್ಪ ಪ್ರಮಾಣ ವಚನ; ರಾಜ್ಯಪಾಲರಿಂದ ಅಧಿಕೃತ ಪತ್ರ<br/> * ಬಿಜೆಪಿ ಮುಖಂಡರಿಂದ ಸುದ್ದಿ ಗೋಷ್ಠಿ<br/> * ಮಧ್ಯರಾತ್ರಿ 1:45- ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನಕ್ಕೆ ತಡೆ ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್ ಅರ್ಜಿ. ಮಧ್ಯರಾತ್ರಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್</p><p><img alt="" src="https://cms.prajavani.net/sites/pv/files/article_images/2018/05/19/Supreme_court(1).jpg" style="width: 600px; height: 516px;" data-original="/http://www.prajavani.net//sites/default/files/images/Supreme_court(1).jpg"/></p><p><strong>2018, ಮೇ 17(ಗುರುವಾರ)</strong></p><p>* ಬೆಳಗಿನ ಜಾವ 4:30– ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್. ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್.<br/> * ಬೆಳಿಗ್ಗೆ 9:00– ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ</p><p><strong><img alt="" src="https://cms.prajavani.net/sites/pv/files/article_images/2018/05/19/bsy_0(1).jpg" style="width: 600px; height: 429px;" data-original="/http://www.prajavani.net//sites/default/files/images/bsy_0(1).jpg"/></strong></p><p>* ಬೆಳಿಗ್ಗೆ 10:00– ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಂದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ. ಎಚ್.ಡಿ.ದೇವೇಗೌಡ, ಗುಲಾಬ್ ನಬಿ ಆಜಾದ್ ಸೇರಿ ಅನೇಕ ಮುಖಂಡರು ಭಾಗಿ.</p><p><img alt="" src="https://cms.prajavani.net/sites/pv/files/article_images/2018/05/19/mahatma.jpg" style="width: 600px; height: 600px;" data-original="/http://www.prajavani.net//sites/default/files/images/mahatma.jpg"/></p><p>* ಬೆಳಿಗ್ಗೆ 11:00– ಸುದ್ದಿಗೋಷ್ಠಿ: ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿರುವಂತೆ ರಾಷ್ಟ್ರೀಕೃತ ಬ್ಯಾಂಕ್, ನೇಕಾರರ ಸಂಘ ಮತ್ತು ಸಹಕಾರಿ ಬ್ಯಾಂಕ್ಗಳಲ್ಲಿ ರೈತರು ಮಾಡಿರುವ ₹1 ಲಕ್ಷದವರೆಗಿನ ಬೆಳೆ ಸಾಲ ಮನ್ನಾ ಶೀಘ್ರ ಘೋಷಣೆ ಮಾಡುವ ಭರವಸೆ<br/> * ಮಧ್ಯಾಹ್ನ: ರೆಸಾರ್ಟ್ ಮತ್ತು ಹೋಟೆಲ್ಗೆ ಕಾಂಗ್ರೆಸ್–ಜೆಡಿಎಸ್ ಶಾಸಕರು ವಾಪಸ್<br/> * ಬಹುಮತವಿಲ್ಲದಿದ್ದರೂ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲ ಅವರ ಕ್ರಮ ಪ್ರಶ್ನಿಸಿ ಹಿರಿಯ ವಕೀಲ ರಾಂ ಜೇಠ್ಮಲಾನಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ<br/> * ಬಿಜೆಪಿ ಪಕ್ಷದ ಕಚೇರಿಯಲ್ಲಿ ನೂತನ ಮುಖ್ಯಮಂತ್ರಿ ಬಿಎಸ್ವೈ ಸಭೆ: ಸೋತ ಅಭ್ಯರ್ಥಿಗಳಿಗೆ ಅಭಯ, ಕಾಂಗ್ರೆಸ್–ಜೆಡಿಎಸ್ ವಿರುದ್ಧ ವಾಗ್ದಾಳಿ<br/> * ಗೋವಾ, ಬಿಹಾರ, ಮೇಘಾಲಯ ಹಾಗೂ ಮಣಿಪುರ ರಾಜ್ಯಗಳ ಅತಿ ದೊಡ್ಡ ಪಕ್ಷಗಳು ಸರ್ಕಾರ ರಚನೆಗೆ ಅವಕಾಶ ಕೋರಲು ರಾಜ್ಯಪಾಲರ ಭೇಟಿಗಾಗಿ ಸಮಯ ನಿಗದಿ. ಕರ್ನಾಟಕದಲ್ಲಿ ಬಿಜೆಪಿಯಿಂದ ಪ್ರಜಾಪ್ರಭುತ್ವ ಕಗ್ಗೊಲೆ ವಿರೋಧಿಸಿ ವಾಗ್ದಾಳಿ.</p><p><img alt="" src="https://cms.prajavani.net/sites/pv/files/article_images/2018/05/19/Goa(1).jpg" style="width: 600px; height: 600px;" data-original="/http://www.prajavani.net//sites/default/files/images/Goa(1).jpg"/><br/> * ಕಾಂಗ್ರೆಸ್ ಮುಖಂಡರ ಸಂಪರ್ಕಕ್ಕೆ ಸಿಗದ ವಿಜಯನಗರ ಶಾಸಕ ಆನಂದ್ ಸಿಂಗ್ ಹಾಗೂ ಮಸ್ಕಿ ಶಾಸಕ ಪ್ರತಾಪ್ಗೌಡ ಪಾಟೀಲ್. ಶಾಸಕರನ್ನು ಕೂಡಿಟ್ಟಿರುವ ಬಿಜೆಪಿ– ಡಿಕೆಶಿ ಆರೋಪ.</p><p>* ಸಂಜೆ 4:30– ಕಾಂಗ್ರೆಸ್ ಶಾಸಕರು ಬಿಡಾರ ಹೂಡಿದ್ದ ಈಗಲ್ಟನ್ ರೆಸಾರ್ಟ್ಗೆ ನೀಡಿದ್ದ ಭದ್ರತೆ ವಾಪಸ್</p><p>* ಸಂಜೆ 4:30– ತುಮಕೂರಿನ ಸಿದ್ಧಗಂಗಾ ಮಠಕ್ಕೆ ಸಿಎಂ ಯಡಿಯೂರಪ್ಪ ಭೇಟಿ. ಡಾ.ಶಿವಕುಮಾರ ಸ್ವಾಮೀಜಿ ಆಶೀರ್ವಾದ ಪಡೆದ ನಾಯಕರು.</p><p><img alt="" src="https://cms.prajavani.net/sites/pv/files/article_images/2018/05/19/792bfa5f-15e2-40d2-805b-8234ac47bc3e(1).jpg" style="width: 600px; height: 401px;" data-original="/http://www.prajavani.net//sites/default/files/images/792bfa5f-15e2-40d2-805b-8234ac47bc3e(1).jpg"/><br/> * ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ದಿನವೇ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬಿಜೆಪಿ ಸರ್ಕಾರದ ಆದೇಶ. ರಾಮನಗರ ಎಸ್ಪಿ ಆಗಿ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ವರ್ಗಾವಣೆ.</p><p><img alt="" src="https://cms.prajavani.net/sites/pv/files/article_images/2018/05/19/790238b4-296a-4113-925a-2f11bdf5a8b8%20(1)(1).jpg" style="width: 400px; height: 520px;" data-original="/http://www.prajavani.net//sites/default/files/images/790238b4-296a-4113-925a-2f11bdf5a8b8%20(1)(1).jpg"/><br/> * ಸಂಜೆ 7:00– ಬಿಜೆಪಿಯ ಕುದುರೆ ವ್ಯಾಪಾರ ತಂತ್ರಕ್ಕೆ ಒಳಗಾಗುವುದನ್ನು ತಪ್ಪಿಸಲು ಜೆಡಿಎಸ್–ಕಾಂಗ್ರೆಸ್ ಶಾಸಕರು ರಾತ್ರಿಯೇ ಕೊಚ್ಚಿಗೆ ತೆರಳಲು ಸಿದ್ಧತೆ. ಎಚ್ಎಎಲ್ನಿಂದ ವಿಶೇಷ ವಿಮಾನದಲ್ಲಿ ಪ್ರಯಾಣಕ್ಕೆ ಸಜ್ಜು.<br/> * ತಡರಾತ್ರಿ: ಕೊಚ್ಚಿ ಬದಲು ಹೈದರಾಬಾದ್ಗೆ ತೆರೆಳಿದ ಕಾಂಗ್ರೆಸ್–ಜೆಡಿಎಸ್ ಶಾಸಕರು</p><p><strong>2018 ಮೇ 18</strong></p><p>* ಶನಿವಾರ ಸಂಜೆಯೊಳಗೆ ವಿಶ್ವಾಸಮತ ಯಾಚನೆ ಮಾಡುವಂತೆ ಬಿಜೆಪಿ ಸರ್ಕಾರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್.<br/> * ಹೈದರಾಬಾದ್ ತಲುಪಿದ ಕಾಂಗ್ರೆಸ್–ಜೆಡಿಎಸ್ ಶಾಸಕರು<br/> * ಹಂಗಾಮಿ ಸ್ಪೀಕರ್ ಆಗಿ ವಿರಾಜಪೇಟೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ</p><p><img alt="" src="https://cms.prajavani.net/sites/pv/files/article_images/2018/05/19/sfsqmOfbebaib.jpg" style="width: 500px; height: 333px;" data-original="/http://www.prajavani.net//sites/default/files/images/sfsqmOfbebaib.jpg"/><br/> * ಸುಪ್ರೀಂ ಕೋರ್ಟ್ ಆದೇಶದ ಕಾರಣ, ತುರ್ತು ಸಂಪುಟ ಸಭೆ ನಡೆಸಿ ವಿಧಾನಸಭಾ ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ ಬಿಎಸ್ವೈ<br/> * ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸಲು ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಆಯ್ಕೆ ಪ್ರಶ್ನಿಸಿ ಕಾಂಗ್ರೆಸ್–ಜೆಡಿಎಸ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ</p><p><strong>2018 ಮೇ 19:</strong></p><p>* ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಮುಂದುವರಿಕೆ: ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಆದೇಶ. ಕಾಂಗ್ರೆಸ್–ಜೆಡಿಎಸ್ ಅರ್ಜಿ ವಜಾ. ನೇರ ಪ್ರಸಾರಕ್ಕೆ ಅನುಮತಿ.<br/> * ಸಂಸದ ಸ್ಥಾನಕ್ಕೆ ಯಡಿಯೂರಪ್ಪ, ಶ್ರೀರಾಮುಲು ರಾಜೀನಾಮೆ</p><p><img alt="" src="https://cms.prajavani.net/sites/pv/files/article_images/2018/05/19/yeyurappa.jpg" style="width: 500px; height: 310px;" data-original="/http://www.prajavani.net//sites/default/files/images/yeyurappa.jpg"/><br/> * ವಿಧಾನಸಭೆ ಅಧಿವೇಶನ: ಶಾಸಕರ ಪ್ರಮಾಣ ವಚನ</p><p><img alt="" src="https://cms.prajavani.net/sites/pv/files/article_images/2018/05/19/vidhana.jpg" style="width: 600px; height: 428px;" data-original="/http://www.prajavani.net//sites/default/files/images/vidhana.jpg"/></p><p>* ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಎಚ್.ಡಿ. ಕುಮಾರಸ್ವಾಮಿ<br/> * ಕಾಂಗ್ರೆಸ್ ಮುಖಂಡರನ್ನು ಸೆಳೆಯುವ ತಂತ್ರ: ಬಿಜೆಪಿ ಮುಖಂಡರು ನಡೆಸಿದ ಮೊಬೈಲ್ ಫೋನ್ ಸಂಭಾಷಣೆ ಬಿಡುಗಡೆ<br/> * ಮಧ್ಯಾಹ್ನ ಗೋಲ್ಡ್ಫಿಂಚ್ ಹೋಟೆಲ್ನಿಂದ ವಿಧಾನಸೌಧಕ್ಕೆ ಬಂದ ವಿಜಯನಗರ ಶಾಸಕ ಆನಂದ್ ಸಿಂಗ್ ಹಾಗೂ ಮಸ್ಕಿ ಶಾಸಕ ಪ್ರತಾಪ್ಗೌಡ ಪಾಟೀಲ್</p><p><img alt="" src="https://cms.prajavani.net/sites/pv/files/article_images/2018/05/19/dal%20(1).jpg" style="width: 600px; height: 524px;" data-original="/http://www.prajavani.net//sites/default/files/images/dal%20(1).jpg"/></p><p>* ವಿಶ್ವಾಸಮತ ಯಾಚನೆ ಪ್ರಸ್ತಾಪದಲ್ಲಿ ‘ರಾಜೀನಾಮೆ’ ಘೋಷಿಸಿದ ಬಿಎಸ್ವೈ<br/> * ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಕೆ. 55 ಗಂಟೆಗಳ ಆಡಳಿತ ಅಂತ್ಯ.</p><p><img alt="" src="https://cms.prajavani.net/sites/pv/files/article_images/2018/05/19/bsy-cm-yeddi.jpg" style="width: 600px; height: 614px;" data-original="/http://www.prajavani.net//sites/default/files/images/bsy-cm-yeddi.jpg"/></p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.