ನವದೆಹಲಿ: ಬಿಜೆಪಿ ಮುಖಂಡ ಬಿರೇಂದರ್ ಸಿಂಗ್ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯಸಭಾ ಸದಸ್ಯತ್ವಕ್ಕೆ ಇದೇ 26ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗಮಂಗಳವಾರ ಘೋಷಿಸಿದೆ.ಮತದಾನ ಮುಕ್ತಾಯವಾದ ಒಂದು ಗಂಟೆಯ ಬಳಿಕ ಮತಎಣಿಕೆ ನಡೆಯಲಿದೆ.
ಬಿರೇಂದರ್ ಅವರ ಅಧಿಕಾರವಧಿ ಆಗಸ್ಟ್ 1, 2022 ರವರೆಗೂ ಇತ್ತು. ಆದರೆ, ಕಳೆದ ಜನವರಿ 20 ರಂದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.