‘ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರಗಳಾಗಲಿ ಎಸ್ಸಿ, ಎಸ್ಟಿ ಸಮು ದಾಯದ ಕೆನೆಪದರವನ್ನು ಗುರುತಿಸುವ ವಿಧಾನವನ್ನು ವಸ್ತುನಿಷ್ಠವಾಗಿ ಪರೀಕ್ಷೆಗೆ ಒಳಪಡಿಸಿಲ್ಲ. ಮೀಸಲಾತಿ ನೀಡುವ ವಿಚಾರದಲ್ಲಿ 1950ರಲ್ಲಿ ಹೊರಡಿಸಿದ್ದ ಆದೇಶದಲ್ಲಿ ಸಮುದಾಯಗಳ ಹೆಸರನ್ನು ಉಲ್ಲೇಖಿಸಿದೆಯೇ ವಿನಾ ಮೀಸಲಾತಿ ಪಡೆಯಲು ಅರ್ಹತೆಯನ್ನು ಉಲ್ಲೇಖಿಸಿಲ್ಲ. ಇದರ ಪರಿಣಾಮ, ಕೆನೆಪದರದಲ್ಲಿರುವವರು ಎಲ್ಲಾ ಸೌಲಭ್ಯ ಗಳನ್ನು ಪಡೆದರು. ಹಿಂದುಳಿದವರು ಇನ್ನಷ್ಟು ಅಂಚಿಗೆ ತಳ್ಳಲ್ಪಟ್ಟರು. ಇದು ಸಂವಿಧಾನದಲ್ಲಿ ಹೇಳಿರುವ ‘ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶ’ದ ಉದ್ದೇಶವನ್ನೇ ವಿಫಲಗೊಳಿಸಿದೆ’ ಎಂದು ಇನ್ನೊಬ್ಬ ಅರ್ಜಿದಾರರಾದ ಒ.ಪಿ. ಶುಕ್ಲಾ ವಾದಿಸಿದರು.