’ಮಂಗಳವಾರ ಹೆಚ್ಚುವರಿಯಾಗಿ 50 ಜಿಲ್ಲಾ ಪೊಲೀಸ್ ಪಡೆಯ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಆದರೆ, ಚುನಾವಣಾ ಪ್ರಚಾರ ಮುಕ್ತಾಯಗೊಳಿಸಿರುವುದರಿಂದ ಹೆಚ್ಚುವರಿ ಸಿಬ್ಬಂದಿಯನ್ನು ವಾಪಸ್ ಪಡೆಯುವಂತೆ ಶಾಸಕರು ಸೂಚಿಸಿದ್ದರು. ಬಳಿಕ, ದಿಢೀರನೆ ಶಾಸಕರು ಗುಂಡುನಿರೋಧಕ ವಾಹನದಲ್ಲಿ ಕ್ವಾಕೊಂಡದತ್ತ ತೆರಳಲು ನಿರ್ಧರಿಸಿದರು. ಅವರ ಬೆಂಗಾವಲು ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಭದ್ರತಾ ಕಾರಣಕ್ಕೆ ಆ ಮಾರ್ಗದಲ್ಲಿ ಸಂಚರಿಸದಂತೆ ಪೊಲೀಸ್ ಅಧಿಕಾರಿಗಳ ಸಲಹೆಯನ್ನು ಶಾಸಕರು ತಿರಸ್ಕರಿಸಿದರು. ಶ್ಯಾಮಗಿರಿಯಲ್ಲಿ ಕೆಲ ನಿಮಿಷಗಳ ಕಾಲವಿದ್ದು ಕ್ವಾಕೊಂಡದತ್ತ ತೆರಳಿದರು. ಕೇವಲ 200 ಮೀಟರ್ ದಾಟಿದಾಗ ನಕ್ಸಲರು ನೆಲದಲ್ಲಿ ಹುದುಗಿಸಿಡಲಾಗಿದ್ದ 60–70 ಕೆ.ಜಿ. ತೂಕದ ಬಾಂಬ್ಗಳನ್ನು ಸ್ಫೋಟಿಸಿದ್ದಾರೆ ಎಂದು ವಿವರಿಸಿದರು.