ಕೇರಳ ಪ್ರವಾಹ: ‘ವಿದೇಶಗಳಲ್ಲಿ ಭಿಕ್ಷಾಪಾತ್ರೆ ಬೇಡ’ –ಕಾಂಗ್ರೆಸ್ ವಾಗ್ದಾಳಿ

ತಿರುವನಂತಪುರ: ಪ್ರವಾಹದಿಂದ ನಲುಗಿರುವ ಕೇರಳದ ಮರು ನಿರ್ಮಾಣಕ್ಕೆ ಅನಿವಾಸಿ ಕೇರಳೀಯರಿಂದ ಸಂಪನ್ಮೂಲ ಕ್ರೋಡೀಕರಿಸಲು, ರಾಜ್ಯ ಸರ್ಕಾರವು ಸಚಿವರು ಮತ್ತು ಅಧಿಕಾರಿಗಳ ತಂಡವನ್ನು ವಿದೇಶಗಳಿಗೆ ಕಳುಹಿಸುತ್ತಿರುವುದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸಿಪಿಎಂ ನೇತೃತ್ವದ ಎಲ್ಡಿಎಫ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ನ ರಾಜ್ಯ ನಾಯಕರು, ಸಚಿವರು ವಿದೇಶ ಪ್ರವಾಸವನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
‘ವಿದೇಶಗಳಲ್ಲಿ ಕೇರಳ ಮೂಲದವರು ಆತ್ಮಾಭಿಮಾನದಿಂದ ಬದುಕುತ್ತಿದ್ದಾರೆ. ರಾಜ್ಯ ಸರ್ಕಾರ ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದು ಅಲ್ಲಿಗೆ ಹೋಗಿ ಬೇಡುವ ಮೂಲಕ, ಭಾರತೀಯರು ಮತ್ತು ಕೇರಳೀಯರಿಗೆ ಅವಮಾನ ಮಾಡಬಾರದು’ ಎಂದು ಪಕ್ಷದ ನಾಯಕರಾದ ಕೆ.ವಿ.ಥಾಮಸ್ ಒತ್ತಾಯಿಸಿದ್ದಾರೆ.
‘ಇದು ವಿದೇಶ ಪ್ರವಾಸ ಮಾಡುವ ಕಾಲವಲ್ಲ. ಸಚಿವರು ರಾಜ್ಯದಲ್ಲೇ ಇದ್ದುಕೊಂಡು ಪುನರ್ವಸತಿ ಕಾರ್ಯದ ಹೊಣೆ ಹೊರಬೇಕು ಎಂದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.