ನವದೆಹಲಿ (ಪಿಟಿಐ):ಕಾಮನ್ವೆಲ್ತ್ ಕ್ರೀಡಾಕೂಟದಸಂದರ್ಭದಲ್ಲಿ ಎರಡು ಕ್ರೀಡಾಂಗಣಗಳ ನವೀಕರಣ ಕೈಗೊಂಡಿದ್ದ ಕಂಪನಿಯ ₹94.24 ಲಕ್ಷ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ರಾಜಾ ಅಡೇರಿ ಕನ್ಸಲ್ಟಂಟ್ ಪ್ರೈವೇಟ್ ಲಿಮಿಟೆಡ್ ವಿರುದ್ಧಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಈ ಕ್ರಮಕೈಗೊಳ್ಳಲಾಗಿದೆ.
ಶಿವಾಜಿ ಮತ್ತು ತಲ್ಕಟೊರಾ ಕ್ರೀಡಾಂಗಣಗಳ ನವೀಕರಣವನ್ನು ಈ ಕಂಪನಿ ಕೈಗೊಂಡಿತ್ತು.