ಸುಜಿತ್ ಕುಮಾರ್ ಎಂಬ ಯುವಕ ಜುಲೈ 19ರಂದು ರಾತ್ರಿ 2 ಗಂಟೆಗೆ ತನ್ನ ಅತ್ತೆ ಮನೆಗೆ ಹೋಗುತ್ತಿದ್ದಾಗ ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿದ್ದವು.ನಾಯಿಗಳಿಂದ ರಕ್ಷಣೆ ಪಡೆಯಲು ಸುಜಿತ್ ಮನೆಯೊಂದಕ್ಕೆ ನುಗ್ಗಿದ್ದಾರೆ,. ಮನೆಯೊಳಗೆ ನುಗ್ಗಿದ ಯುವಕನನ್ನು ಕಳ್ಳನೆಂದು ತಪ್ಪಾಗಿ ತಿಳಿದ ಮನೆಯವರು ಹಿಗ್ಗಾಮುಗ್ಗ ಥಳಿಸಿ ಆಮೇಲೆ ಪೆಟ್ರೋಲ್ ಸುರಿದು ಕಿಚ್ಚಿಟ್ಟಿದ್ದಾರೆ ಎಂದು ಬರಬಂಕಿ ಎಸ್ಐ ಆಕಾಶ್ ತೋಮರ್ ಹೇಳಿದ್ದಾರೆ.